ಚಿತ್ರದುರ್ಗ ನಾಲೆಯಿಂದ ತಾಲ್ಲೂಕಿನ ಬಾಗೂರು ಹಾಗೂ ನೀರಗುಂದ ಗ್ರಾಮದ 3 ಕೆರೆಗಳಿಗೆ ಮಾತ್ರ ನೀರು ತುಂಬಿಸುವುದರಿಂದ ತಾಲ್ಲೂಕಿನ ಎಲ್ಲಾ ರೈತರಿಗೆ ಅನುಕೂಲ ಆಗುವುದಿಲ್ಲ. ಹಾಗಾಗಿ, ಆ ಭಾಗದಲ್ಲಿ ಬರುವ ಮಲ್ಲಪ್ಪನಹಳ್ಳಿ, ಹೆಬ್ಬಳ್ಳಿ, ನಾಗರಕಟ್ಟೆ, ದೇವಪುರ, ಗೂಳಿಹಟ್ಟಿ, ಜಾನಕಲ್ ಸೇರಿ ಇನ್ನಿತರ ಕೆರೆಗಳಿಗೂ ನೀರು ತುಂಬಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಈ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾಗಿ 11 ವರ್ಷಕ್ಕೆ ಕೇವಲ ₹ 2,670 ಕೋಟಿ ಖರ್ಚು ಮಾಡಲಾಗಿದೆ. ಈ ಯೋಜನೆಗೆ ಮೀಸಲಿಟ್ಟಿರುವ ಇನ್ನೂ ₹ 9,670 ಕೋಟಿ ಖರ್ಚು ಮಾಡಲು ಇನ್ನೆಷ್ಟು ವರ್ಷ ಬೇಕು ಎಂದು ಪ್ರಶ್ನಿಸಿದರು.