‘ಇಲ್ಲಿನ ಶಿವಕುಮಾರ ಕಲಾ ಸಂಘ, ಶಿವಸಂಚಾರ, ರಂಗಪ್ರಯೋಗಶಾಲೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಶಿವಸಂಚಾರ ಪ್ರತಿವರ್ಷ 3 ನಾಟಕಗಳಂತೆ ಕಳೆದ 24 ವರ್ಷ 69 ನಾಟಕಗಳ ಸಾವಿರಾರು ಪ್ರದರ್ಶನಗಳನ್ನು ನಾಡಿನ ಒಳಹೊರಗೆ ನೀಡಿದೆ. ಇದರಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಬರೆದ ‘ಜಂಗಮದೆಡೆಗೆ’, ‘ಅಂಕುಶ’, ‘ಅಕ್ಕನಾಗಲಾಂಬಿಕೆ’, ‘ಮೋಳಿಗೆ ಮಾರಯ್ಯ’, ‘ಅಂತರಂಗ–ಬಹಿರಂಗ’ ಎನ್ನುವ ನಾಟಕಗಳೂ ಇವೆ’ ಎಂದು ವಿವರಿಸಿದರು.