‘ಸಾಮೂಹಿಕ ವಿವಾಹ ಮಹೋತ್ಸವದಿಂದ ಬಡವರ ಕಲ್ಯಾಣವಾಗಿದೆ. ಬಡವರ ಬಂಧು ಮುರುಘಾ ಮಠ. ಇದೊಂದು ಭಾವೈಕ್ಯ ಕೇಂದ್ರ. ವರದಕ್ಷಿಣೆ ಹಾಗೂ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕುವ ಮೂಲಕ ಸಮ ಸಮಾಜ ನಿರ್ಮಾಣವಾಗಬೇಕು. ಸಂಸಾರದಲ್ಲಿ ದಂಪತಿ ಮಧ್ಯೆ ಪ್ರತಿಷ್ಠೆ ಇಣುಕದಂತೆ ಜಾಗೃತೆ ವಹಿಸಿ, ಸದಾ ಪ್ರೀತಿ, ನೆಮ್ಮದಿಯ ಜೀವನ ಸಾಗಿಸಬೇಕು. ನಂಬಿಕೆ ಎಂಬ ಔಷಧ ನಮ್ಮಲ್ಲಿರಬೇಕು’ ಎಂದು ತಿಳಿಸಿದರು.