ವನಜಾಕ್ಷಮ್ಮ ಅವರಿಗೆ ಇಬ್ಬರು ಮಕ್ಕಳಿದ್ದು, ಚಿಕ್ಕವರಾಗಿದ್ದಾಗಲೇ ಪತಿ ತೀರಿಕೊಂಡರು. ಆದರೆ ಧೃತಿಗೆಡದ ಅವರು ಕೂಲಿ ಮಾಡಿ ಮಕ್ಕಳನ್ನು ಸಾಕಿ ಬೆಳೆಸಿದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಅವರಿಗೆ ಸ್ವಂತ ಮನೆ, ನಿವೇಶನ, ಜಮೀನು ಯಾವುದೂ ಇರಲಿಲ್ಲ. 2012ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆರಂಭಿಸಿದ ಮಾರುತಿ ಮಹಿಳಾ ಸಂಘದ ಸದಸ್ಯೆಯಾದ ನಂತರ ಅವರ ಜೀವನವೇ ಬದಲಾಯಿತು.