ಚಿತ್ರದುರ್ಗ: ಇಲ್ಲಿಯ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಶನಿವಾರ ಸಂಭ್ರಮದ ತೆರೆ ಬಿದ್ದಿತು.
ಎರಡು ದಿನಗಳ ಕ್ರೀಡಾಕೂಟದಲ್ಲಿ ನೂರಾರು ನೌಕರರು ಅತ್ಯುತ್ಸಾಹದಿಂದ ಭಾಗವಹಿಸಿ ಪದಕಗಳನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಎಲ್ಲ ಇಲಾಖೆಯ ಸಿಬ್ಬಂದಿ ಒಗ್ಗಟ್ಟು ಪ್ರದರ್ಶಿಸಿದರು. ವಿವಿಧ ಕ್ರೀಡಾ ವಿಭಾಗಗಳಲ್ಲಿ, ಸಾಂಸ್ಕೃತಿಕ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಮಾರೋಪದಲ್ಲಿ ಬಹುಮಾನ ನೀಡಲಾಯಿತು.
100 ಮೀಟರ್ ಓಟ, ಥ್ರೋಬಾಲ್, ಗುಂಡು ಎಸೆತ, ಕಬಡ್ಡಿ, ವಾಲಿಬಾಲ್ ಸೇರಿ ವಿವಿಧ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದರು.
ಕ್ರೀಡಾಕೂಟದ ಫಲಿತಾಂಶ:
40 ವರ್ಷ ಒಳಗಿನ ವಿಭಾಗ (ಪುರುಷರು): ಜಾವಲಿನ್ ಎಸೆತ: ಡಿ.ಮಹಾಂತೇಶ್–1, ಜಿ. ಶ್ರೀನಿವಾಸ –2, ಸತೀಶ್–3.
1,000 ಮೀಟರ್ ಓಟ: ನಿಂಗಪ್ಪ ರಾಜಪುರೆ –1, ಶಿವಪ್ರಕಾಶ್ –2, ಟಿ.ಅಶೋಕ–3.
4x400 ರಿಲೇ: ಟಿ.ಮಹಂತೇಶ್, ಮಂಜುನಾಥ, ಎಸ್.ಶಿವಪ್ರಕಾಶ್, ಎಚ್.ಬಿ.ಸಚಿನ್ ––1, ಬಿ.ಪಾಂಡುರಂಗಪ್ಪ, ಶಿವಣ್ಣ, ಎಂ.ಎಸ್.ಮಧು, ಕೃಷ್ಣಕುಮಾರ್–2.
4x100 ರಿಲೇ: ಲಿಂಗರಾಜು, ಎ.ಎನ್.ಮಹಬೂಬ್, ಮಹೇಂದ್ರ ಪಾಟೇಲ್, ಎಚ್.ಬಸವರಾಜ್– 1, ಮಹಲಿಂಗ, ಜಿ.ಎನ್.ಹರೀಶ್, ನಿಂಗಪ್ಪ, ಟಿ.ಮಹಂತೇಶ್–2.
ಎತ್ತರ ಜಿಗಿತ: ನಿಂಗಪ್ಪ ರಾಜಪುರೆ – 1, ವಿ.ಬಿ.ನಂದನ್ – 2, ಟಿ.ಮಹಂತೇಶ್–3.
1,500 ಮೀ ಓಟ: ನಿಂಗಪ್ಪ ರಾಜಪುರೆ–1, ಆರ್.ಗಿರೀಶ್ –2, ಪರಮೇಶ್ವರಪ್ಪ– 3.
ಚಕ್ರ ಎಸೆತ: ಡಿ.ಎಸ್.ಸಮೀರ್ –1, ಟಿ.ಅಶೋಕ –2, ಟಿ.ಎಸ್.ಮಹಾಲಿಂಗ–3.
400 ಮೀ ಹರ್ಡಲ್ಸ್: ಎಚ್.ಜಿ.ಕಟ್ಟೆಪ್ಪಯ್ಯ
35 ವರ್ಷ ಒಳಪಟ್ಟ ವಿಭಾಗ (ಮಹಿಳೆಯರು): 4x400 ರಿಲೇ: ಎನ್.ಎ.ಸಬ್ರೀನ್ ತಾಜ್, ಬಿ.ವೃಂದ, ಆರ್.ಶೋಭ, ಎನ್.ದಿವ್ಯ –1, ಕೆ.ಎನ್.ಗೌತಮಿ, ಬಿ.ಶೋಭ, ವೈ.ಚಂದ್ರಕಲಾ, ಎಸ್.ಪಿ.ವಿಶಾಲಾಕ್ಷಿ– 2.
4x100 ರಿಲೇ: ಬಿ.ವೃಂದ, ಎನ್.ಎ.ಸಬ್ರೀನ್ ತಾಜ್, ಪಿ.ಎಚ್.ವೀಣಾ, ಎನ್.ದಿವ್ಯ – 1, ಕೆ.ಎನ್.ಗೌತಮಿ, ಬಿ.ಶೋಭ, ವೈ.ಚಂದ್ರಕಲಾ, ಎಸ್.ಪಿ.ವಿಶಾಲಾಕ್ಷಿ–2.
ಎತ್ತರ ಜಿಗಿತ: ಬಿ.ವೃಂದಾ–1, ಟಿ.ಮಹಾಲಕ್ಷ್ಮಿ–2, ಕೆ.ಒ.ಸಾಕಮ್ಮ– 3.
ಕುಸ್ತಿ: 97 ಕೆ.ಜಿ ವಿಭಾಗ– ಶ್ರೀಕಾಂತ್ ಪಿ.ಶೀರೋಳ. 87 ಕೆ.ಜಿ ವಿಭಾಗ – ಎಸ್.ಪೃಥ್ವಿ. 90 ಕೆ.ಜಿ ವಿಭಾಗ – ತಿಮ್ಮೇಶ್. 75 ಕೆ.ಜಿ ವಿಭಾಗ – ಮಂಜುನಾಥ. 65 ಕೆ.ಜಿ ವಿಭಾಗ– ಆರ್.ಟಿ.ಲೋಹಿತ್. 67 ಕೆ.ಜಿ ವಿಭಾಗ – ನಿಂಗಪ್ಪ ರಾಜಪೊರೆ.
ಪವರ್ ಲಿಫ್ಟಿಂಗ್: 52 ಕೆ.ಜಿ ವಿಭಾಗ – ಯೋಗರಾಜ್. 56 ಕೆ.ಜಿ ವಿಭಾಗ– ಜಯಕುಮಾರ್. 60 ಕೆ.ಜಿ ವಿಭಾಗ – ನಾಗರಾಜ. 67 ಕೆ.ಜಿ ವಿಭಾಗ– ಪ್ರಕಾಶ್. 75 ಕೆ.ಜಿ ವಿಭಾಗ – ಮಾರುತಿ ಪ್ರಸಾದ್. 82.5 ಕೆ.ಜಿ ವಿಭಾಗ – ಮಂಜುನಾಥ. 90 ಕೆ.ಜಿ ವಿಭಾಗ:ತಿಮ್ಮೇಶ್ – 1, ಭಾಗೇಶ್–2. 100 ಕೆ.ಜಿ ವಿಭಾಗ: ಶ್ರೀಕಾಂತ್ ಶಿರೋಳ –1, ಎಂ.ಎಚ್. ಚಂದ್ರಶೇಖರ್ ನಾಯಕ್–2. 110 ಕೆ.ಜಿ ವಿಭಾಗ: ಆರ್.ಲಿಂಗರಾಜ್ – 1, ಎಚ್.ಎನ್.ಸಿದ್ದರಾಮಪ್ಪ–2.
125 ಕೆ.ಜಿ ವಿಭಾಗ– ಟಿ.ಪಿ.ಅಂಜಿನಪ್ಪ.
ಭಾರ ಎತ್ತುವ ಸ್ಪರ್ಧೆ: 54 ಕೆ.ಜಿ ವಿಭಾಗ: ಎ.ಜಯಪ್ಪ –1,. ಜಿ.ಎಂ.ಹರೀಶ್–2. 59 ಕೆ.ಜಿ ವಿಭಾಗ: ಎನ್.ಶಿವರಾಜ್–1, ಮಂಜುನಾಥ–2. 64 ಕೆ.ಜಿ ವಿಭಾಗ: ಚನ್ನಯ್ಯ– 1. ಜಯರಾಂ–2. 70 ಕೆ.ಜಿ ವಿಭಾಗ: ಬಿ.ಎಸ್.ನಿತ್ಯಾನಂದ –1. ಅಂಜಿನಪ್ಪ–2. 76 ಕೆ.ಜಿ ವಿಭಾಗ: ಮಾರುತಿ ಪ್ರಸಾದ್ – 1. ಪೃಥ್ವಿ–2. 83 ಕೆಜಿ ವಿಭಾಗ: ತಿಮ್ಮೇಶ್– 1. ಆರ್.ಬಸವರಾಜ್–2. 91 ಕೆ.ಜಿ ವಿಭಾಗ: ರಂಗನಾಥ್ – 1, ಪ್ರಸಾದ್ ಕುಮಾರ್–2. 99 ಕೆ.ಜಿ ವಿಭಾಗ: ಬಿ.ಟಿ.ತಿಪ್ಪೇರುದ್ರಪ್ಪ – 1, ಮನೋಹರ್–2. 108 ಕೆ.ಜಿ ವಿಭಾಗ: ಎಂ. ನಜೀರ್ ಅಹಮ್ಮದ್ –1, ಜಿ.ಎ.ಶ್ರೀನಿವಾಸ–2. 108 ಕೆ.ಜಿ ಮೇಲಿನ ವಿಭಾಗ: ಆರ್.ಬಸವರಾಜ್.
ವಾಲಿಬಾಲ್ (ಪುರುಷರು): ಹೊಸದುರ್ಗ –1, ಚಿತ್ರದುರ್ಗ–2.
ಟೇಬಲ್ ಟೆನಿಸ್ (40 ವರ್ಷ ಒಳಗಿನ ಪುರುಷರು): ಎಂ.ತಿರುಮಲ ಪಾಟೇಲ್–1, ಎಂ.ರಾಮು–2.
ಟೇಬಲ್ ಟೆನಿಸ್ ಡಬಲ್ಸ್: ಎಂ.ತಿರುಮಲ ಪಾಟೇಲ್, ಎಂ.ರಾಮು – 1. ವಿವೇಕ್, ದೀಕ್ಷಿತ್–2.
ಬಾಲ್ ಬ್ಯಾಡ್ಮಿಂಟನ್ (ಮಹಿಳೆಯರು): ಹೊಸದುರ್ಗ –1, ಚಿತ್ರದುರ್ಗ–2.
ಬಾಲ್ ಬ್ಯಾಡ್ಮಿಂಟನ್ (ಪುರುಷರು): ಮೊಳಕಾಲ್ಮುರು – 1, ಚಿತ್ರದುರ್ಗ–2.
ಕಬಡ್ಡಿ (ಮಹಿಳೆಯರು): ಚಿತ್ರದುರ್ಗ ಶಿಕ್ಷಣ ಇಲಾಖೆ – 1, ಚಿತ್ರದುರ್ಗ ನ್ಯಾಯಾಂಗ ಇಲಾಖೆ–2
ಕಬಡ್ಡಿ (ಪುರುಷರು): ಹೊಳಲ್ಕೆರೆ – 1, ಚಿತ್ರದುರ್ಗ–2.
ಚೆಸ್ (ಪುರುಷರು): ಟಿ.ವಿರೇಶ್ – 1, ವೈ.ರಾಜಶೇಖರ್ – 2, ನಾಗೇಂದ್ರ ಬಾಬು–3.
ಚೆಸ್ (ಮಹಿಳೆಯರು): ಟಿ.ಆಶಾ – 1. ರಾಜೇಶ್ವರಿ – 2; ಆರ್.ಕುಮುದಾ–3.
ಟೇಬಲ್ ಟೆನಿಸ್ (40 ರಿಂದ 50 ವರ್ಷ ಒಳಪಟ್ಟ ಪುರುಷರು): ಆರ್.ನಾಗೇಂದ್ರ ಬಾಬು – 1. ಎಚ್.ಬಿ. ಪೂಜಾರ್–2.
ಕೇರಂ ಸಿಂಗಲ್ಸ್ (ಪುರುಷರು): ಅಹಮ್ಮದ್ ಷರೀಫ್ –1, ಎಂ.ಪಿ.ಶಿವಪ್ರಕಾಶ್–2.
ಕೇರಂ ಡಬಲ್ಸ್ (ಪುರುಷರು): ಎನ್.ಆರ್.ದಿಲೀಪ್ ಕುಮಾರ್, ಜಾನ್ ಮೋಹನ್ ರಾಜ್– 1, ಎಂ.ಪಿ.ಶಿವಪ್ರಕಾಶ್, ಅಹಮ್ಮದ್ ಷರೀಫ್– 2.
ಕೇರಂ ಸಿಂಗಲ್ಸ್ (ಮಹಿಳೆಯರು): ಆರ್.ಎಂ.ಗಿರಿಜಮ್ಮ – 1, ಶಾಹೀನ–2.
ಕೇರಂ ಡಬಲ್ಸ್ (ಮಹಿಳೆಯರು): ಆರ್.ಎಂ. ಗಿರಿಜಮ್ಮ ರಾಜೇಶ್ವರಿ –1, ಶಾಹೀನ, ಸವಿತ– 2.
ಟೆನ್ನಿಕಾಯ್ಟ್ ಸಿಂಗಲ್ಸ್ ( 40 ವರ್ಷ ಒಳಗಿನ ಮಹಿಳೆಯರು): ಎ.ವಿ.ರತ್ನಮ್ಮ– 1, ಎಂ.ಎಸ್.ಶ್ವೇತ–2.
ಟೆನ್ನಿಕಾಯ್ಟ್ ಡಬಲ್ಸ್ (40 ವರ್ಷ ಒಳಗಿನ ಮಹಿಳೆಯರು): ಎಚ್.ಎ.ಲಕ್ಷ್ಮಿ, ಬಿ.ಐ.ಜೀವತಿ ರಾಣಿ – 1, ಎಚ್.ಚಂದ್ರಕಲಾ, ಎಂ.ಎಸ್.ಶ್ವೇತಾ–2.
ಟೆನ್ನಿಕಾಯ್ಟ್ ಸಿಂಗಲ್ಸ್ ( 40 ವರ್ಷ ಮೇಲಿನ ಮಹಿಳೆಯರು):ವಿಶಾಲಾಕ್ಷಿ –1, ಗಿರಿಜಮ್ಮ–2.
ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ (ಪುರುಷರು): ಸಿ.ಎನ್.ನಾಗಭೂಷಣ್, ಎಚ್.ಆರ್.ಮಧು–1.
ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ (40 ವರ್ಷ ಒಳಗಿನ ಮಹಿಳೆಯರು): ವಿಮಲಾಕ್ಷಿ, ವಿಶಾಲಾಕ್ಷಿ – 1, ಅನಿತ, ರೋಜಾ–2.
ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ (40 ವರ್ಷ ಒಳಗಿನ ಮಹಿಳೆಯರು): ವಿಮಲಾಕ್ಷಿ –1, ಜೆ.ಅನಿತ–2.
ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ (40 ವರ್ಷ ಮೇಲಿನ ಮಹಿಳೆಯರು): ಬಿ.ವಿಮಲಾಕ್ಷಿ, ಆರ್.ಚೈತ್ರ – 1, ಎಂ.ಬಿ.ನಾಗರತ್ನ, ಬಿ.ಮಂಜುಳ–2.
ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ (40 ವರ್ಷ ಮೇಲಿನ ಮಹಿಳೆಯರು): ವಿಮಲಾಕ್ಷಿ –1, ಎಂ.ಬಿ.
ನಾಗರತ್ನ–2.
ಸಾಂಸ್ಕೃತಿಕ ಸ್ಪರ್ಧೆ
ಮಣಿಪುರಿ ನೃತ್ಯ: ಶ್ವೇತ– 1, ಎಸ್.ಅನಿತ–2.
ಕಿರುನಾಟಕ: ಅಂಬಿಕ ಮತ್ತು ತಂಡ – 1, ಆರ್.ಎಸ್.ತಿಮ್ಮಯ್ಯ ಮತ್ತು ತಂಡ– 2.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ಮಂಜುನಾಥ– 1, ಶಾಂತಮ್ಮ – 2, ಗಾಯತ್ರಿ ಮಧುಸೂದನ್–3.
ಹಿಂದೂಸ್ತಾನಿ ಲಘು ಶಾಸ್ತ್ರೀಯ ಸಂಗೀತ: ಬಿ.ಟಿ.ಭರತೇಶ್ – 1, ಜೆ.ಆರ್.ಗೌರಮ್ಮ – 2, ಡಿ.ಮಂಜುನಾಥ– 3.
ಹಾರ್ಮೋನಿಯಂ: ಜಯಪ್ರಕಾಶ್.
ಕಿರುನಾಟಕ: ಬಿ.ಓ.ಶೋಭ ತಂಡ – 1, ಶ್ವೇತ ತಂಡ–2.
ಭರತನಾಟ್ಯ: ಶ್ವೇತ –1, ಮೀನಾಕ್ಷಿ –2, ಜೆ. ಅನಿತಾ–3.
ಕರಕುಶಲ ಸ್ಪರ್ಧೆ: ಕೆ.ಜ್ಯೋತಿ– 1, ಆರ್.ಶಾಂತಮ್ಮ – 2, ಬಿ.ಎಸ್.ಆಶಾ–3.
ಜನಪದ ಗೀತೆ: ಪಿ.ಅಂಬಿಕ –1, ಮಹಾಸ್ವಾಮಿ – 2. ಎಸ್.ಜಾನಕಮ್ಮ–3.
ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ: ಎಸ್. ಜಾನಕಮ್ಮ – 1, ಬಿ.ಓ.ಶೋಭ – 2, ಟಿ.ಭರತೇಶ್–3.
ಕರ್ನಾಟಕ ಶಾಸ್ತ್ರೀಯ ಸಂಗೀತ: ಶಾಂತಮ್ಮ –1, ಗೌರಮ್ಮ – 2, ಜಯಪ್ರಕಾಶ್– 3.
....
ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು. ಮಹಿಳೆಯರು ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು.
-ಆರ್.ಬನ್ನಿಕಟ್ಟೆ ಹನುಮಂತಪ್ಪ, ನ್ಯಾಯಾಧೀಶರು, ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.