‘ಜಗತ್ತಿನಲ್ಲಿ ಅಶಾಂತಿ, ಹಿಂಸೆ, ಭಯೋತ್ಪಾದನೆಯಂಥ ಚಟುವಟಿಕೆ ಹೆಚ್ಚುತ್ತಲಿವೆ. ವಿಶ್ವಸಂಸ್ಥೆ ವಿಶ್ವಶಾಂತಿಯನ್ನು ಕಾಪಾಡಲು ಹುಟ್ಟಿಕೊಂಡಿದೆ. ಈಗ ಜನರ ಮನದಲ್ಲಿ ಮನೆ ಮಾಡಿರುವ ಅಹಂಕಾರ, ಸ್ವಾರ್ಥ, ಅಧಿಕಾರದ ದಾಹ, ವಿಷಯಲೋಲುಪತೆ ಮತ್ತಿತರ ಕಾರಣಗಳಿಂದ ವಿಶ್ವಶಾಂತಿ ಹಗಲುಗನಸಾಗುತ್ತಿದೆ. ಈ ಕಾರಣ ವಿಶ್ವಸಂಸ್ಥೆ ಈ ವರ್ಷದಿಂದ ಫೆ.4ರಂದು ವಿಶ್ವ ಭ್ರಾತೃತ್ವ ದಿನ ಆಚರಿಸಲು ಘೋಷಿಸಿದೆ. ಇದು ಕೇವಲ ಘೋಷಣೆಯಾಗದೆ ವ್ಯಕ್ತಿಗಳ ಮನ, ಮನೆಯಲ್ಲಿ ಸಹೋದರತ್ವ ಭಾವನೆ ನೆಲೆಗೊಂಡು ಯುದ್ಧ, ಹಿಂಸೆ, ದ್ವೇಷ ಭಾವನೆಯನ್ನು ಕಿತ್ತಿಸೆಯುವಂತಾಗಬೇಕು’ ಎಂದು ಕಿವಿಮಾತು ಹೇಳಿದರು.