ವಿಜಯಪುರ ಜಿಲ್ಲೆ ಹೊರತು ಪಡಿಸಿದರೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸೂಕ್ತ ವಾತಾವರಣ ಹೊಂದಿವೆ. 10 ವರ್ಷಗಳಿಂದ ಇಲ್ಲಿಯ ರೈತರು ಹೊಸ– ಹೊಸ ಪ್ರಯೋಗಗಳನ್ನು ಮಾಡುತ್ತ ದಾಳಿಂಬೆ, ಪಪ್ಪಾಯಿ, ಮೋಸಂಬಿ, ಸೀಬೆ, ಅಂಜೂರ, ಕಲ್ಲಂಗಡಿ ಬೆಳೆದು ಸಫಲತೆ ಗಳಿಸಿದ್ದಾರೆ. ಆದರೆ, ಈಚಿನ ದಿನಗಳಲ್ಲಿ ಹಣ್ಣಿನ ಬೆಳೆಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.