ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಶಕ್ತಿ ಬಲಗೊಳಿಸಿದ ಹರ್ಡೇಕರ್‌ ಸೇವಾದಲ: ವೈ.ಎಚ್.ನಾಗರಾಜ್ ಶ್ಲಾಘನೆ

Last Updated 7 ಮೇ 2019, 10:52 IST
ಅಕ್ಷರ ಗಾತ್ರ

ಶಿವಮೊಗ್ಗ:ಭಾರತ ಸೇವಾದಲ ಕಟ್ಟುವ ಮೂಲಕ ನಾ.ಸು.ಹರ್ಡೇಕರ್‌ ಅವರು ಯುವಶಕ್ತಿಯನ್ನೇ ಜಾಗೃತಿ ಗೊಳಿಸಿದರು ಎಂದು ಸೇವಾದಲದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್.ನಾಗರಾಜ್ ಶ್ಲಾಘಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸೇವಾದಲ ಆಯೋಜಿಸಿದ್ದ ನಾ.ಸು.ಹರ್ಡೇಕರ್ ಅವರ ಜನ್ಮದಿನಾಚರಣೆ ಮತ್ತು ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾದಲದ ಮೂಲಕ ರಾಷ್ಟ್ರಪ್ರೇಮ ಬೆಳೆಸಿದರು. ಅವರ ಆದರ್ಶ, ತತ್ವಗಳನ್ನು ಎಲ್ಲರೂ ಮಾದರಿ.ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರತಿಯೊಬ್ಬರಲ್ಲೂ ಶಿಸ್ತು, ಸಂಯಮ ಬದ್ಧತೆಯ ಗುಣಗಳನ್ನು ಬೆಳೆಸುವಲ್ಲಿ ಅವರ ಪಾತ್ರ ಹಿರಿದಾಗಿತ್ತು. ಅವರ ದೇಶಪ್ರೇಮ ಅನನ್ಯ. ಅವರ ಜನ್ಮದಿನ ಆಚರಣೆಯ ಮೂಲಕ ಅವರ ಆದರ್ಶಗಳು ಯುವ ಜನರಿಗೆ ತಲುಪಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಬಲದೇವ ಕೃಷ್ಣ ಮಾತನಾಡಿ, ಗಣ್ಯರ ಆದರ್ಶ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಅವರ ನಡೆದಂತೆ ನಡೆಯಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಚಂದ್ರಭೂಪಾಲ್, ಕೆ.ಬಿ.ವಿನಾಯಕ ಮೂರ್ತಿ, ನಾಜಿಯಾ, ಅರ್ಚನಾ, ಸೆಲ್ವಂ ಮಾರ್ಟಿಸ್‌, ವಿಜಯಕುಮಾರ್, ಪಾತಿಮಾ, ಮಾರುತಿ, ರೋಜಾ ಷಣ್ಮುಗಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT