ಶಿವಮೊಗ್ಗ: ಪುರದಾಳು ಗ್ರಾಮದ ಗುಡ್ಡದ ಅರಕೆರೆ ಅರಣ್ಯದಲ್ಲಿ ಬೆಲೆ ಬಾಳುವ ಮರ ಕಡಿಯಲು ಹೋದ ಐವರನ್ನು ಗುರುವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬೆಳಗ್ಗಿನ ಜಾವ ಮೂರು ದೊಡ್ಡ ಮರಗಳನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದರು.ವಲಯ ಅರಣ್ಯಾಧಿಕಾರಿಹಾಲಪ್ಪ ನೇತೃತ್ವದಲ್ಲಿ ದಾಳಿ ನಡಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.