ಕನಕಪುರ: ಕಂದಾಯ ಇಲಾಖೆ ಸರ್ಕಾರಿ ನೌಕರರ ಸಂಘದ ವತಿಯಿಂದ ದೇವನಹಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ 2018ನೇ ಸಾಲಿನ ರೆವಿನ್ಯೂ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನಕಪುರ ತಾಲ್ಲೂಕು ತಂಡ ಗೆಲುವು ಸಾಧಿಸಿದೆ.
ವಾರ್ಷಿಕವಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಬೆಂಗಳೂರು, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯ ಒಟ್ಟು 13 ತಾಲ್ಲೂಕುಗಳ ತಂಡಗಳು ಪಾಲ್ಗೊಂಡಿದ್ದವು.
ಕನಕಪುರ ತಾಲ್ಲೂಕು ತಂಡ ತಹಶೀಲ್ದಾರ್ ಎಂ.ಆನಂದಯ್ಯ ಅವರ ನೇತೃತ್ವದಲ್ಲಿ ಪ್ರಥಮ ಸ್ಥಾನಗಳಿಸಿ ಕಪ್ ತನ್ನದಾಗಿಸಿಕೊಂಡಿದೆ.