ಕರ್ತವ್ಯದ ಮೇಲೆ ಶಿವಮೊಗ್ಗಕ್ಕೆ ಬಂದಿದ್ದ ಅವರು ಮರಳಿ ಕುಂಸಿಗೆ ಹೋಗಲು ಬಸ್ನಿಲ್ದಾಣಕ್ಕೆ ಬಂದಿದ್ದಾರೆ. ತಡರಾತ್ರಿಯಾದ ಕಾರಣ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಇವರು ನಿಂತಿದ್ದ ಜಾಗಕ್ಕೆ ಬಂದನದೀಂ ಹಾಗೂ ನಜೀರ್ಹಣ ನೀಡುವಂತೆ ಕೇಳಿದ್ದಾರೆ. ನಿರಾಕರಿಸುತ್ತಿದ್ದಂತೆ ಮಂಜುನಾಥ್ ಅವರಿಗೆ ಮನಸೋಇಚ್ಚೆ ಇರಿದಿದ್ದಾರೆ. ಜನರು ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದಿದ್ದ ಅವರನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿದೆ.