ಶಿವಮೊಗ್ಗ: ಸಿಂಗಾಪುರ ಕಂಪನಿಯ ವ್ಯವಹಾರದ ಪ್ರಾಜೆಕ್ಟ್ ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕರಿಗೆ ₨ 55 ಲಕ್ಷ ವಂಚಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಮಂಗಳವಾರ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಇನ್ಸ್ಪೈರಿಂಗ್ ಬ್ಯುಸಿನೆಸ್ ಪ್ರಾಸೆಸ್ ಲಿಮಿಟೆಡ್ ಸಂಸ್ಥೆಯ ಸ್ವಾತಿ ಷಣ್ಮುಖಂ, ಅವರ ತಾಯಿ ಗಿರಿಜಾ ಅವರನ್ನು ಬಂಧಿಸಲಾಗಿದೆ.
ವಂಚನೆ ಕುರಿತು ಭರತ್ ಹೆಗಡೆ ಎನ್ನುವವರು ಜೂನ್ 1ರಂದು ಬಡಾವಣೆ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು.