ವಿಜಯಪುರ ತಾಲ್ಲೂಕಿನ ಹೊನ್ನುಟಗಿ ಗ್ರಾಮದ ಸೌರಭ ಜನರಲ್ ಸ್ಟೋರ್ಸ್ಗೆ ಏ.2ರಂದು ಸಂಜೆ 4ರ ಸುಮಾರಿಗೆತೆರಳಿದ ಆರೋಪಿಗಳಾದ ಗೋಪಾಲ ಖಣಿಮನಿ, ಉದಯಕುಮಾರ ಜೋಶಿ, ಶಿವಕುಮಾರ ರೇಶ್ಮಿ ಮತ್ತು ಸುರೇಶ ಚಿನಗುಂಡಿ ಎಂಬುವವರು ಪತ್ರಿಕೆ ಮತ್ತು ಟಿ.ವಿ.ಮಾಧ್ಯಮಗಳ ಹೆಸರು ಹೇಳಿಕೊಂಡು ಗುರುತಿನ ಚೀಟಿ ತೋರಿಸಿ, ಮದ್ಯಕ್ಕೆ ಬೇಡಿಕೆ ಇಟ್ಟಿದ್ದರು. ಮದ್ಯ ಕೊಡದಿದ್ದರೆ ಸುದ್ದಿ ಪ್ರಸಾರ ಮಾಡುವುದಾಗಿಬೆದರಿಕೆ ಒಡ್ಡಿದ್ದರು ಎಂದು ಸುರೇಶ ತೇರದಾಳ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.