ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಕ್ಕೆ ಬೇಡಿಕೆ ಇಟ್ಟ ಪತ್ರಕರ್ತರು: ದೂರು ದಾಖಲು

Last Updated 5 ಏಪ್ರಿಲ್ 2020, 16:10 IST
ಅಕ್ಷರ ಗಾತ್ರ

ವಿಜಯಪುರ: ಕುಡಿಯಲು ಮದ್ಯ ನೀಡದಿದ್ದರೆ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಬಿತ್ತರಿಸುವುದಾಗಿಬೆದರಿಕೆ ಒಡ್ಡಿದ ಆರೋಪದ ಮೇರೆಗೆ ನಾಲ್ವರು ಪತ್ರಕರ್ತರ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯಪುರ ತಾಲ್ಲೂಕಿನ ಹೊನ್ನುಟಗಿ ಗ್ರಾಮದ ಸೌರಭ ಜನರಲ್‌ ಸ್ಟೋರ್ಸ್‌ಗೆ ಏ.2ರಂದು ಸಂಜೆ 4ರ ಸುಮಾರಿಗೆತೆರಳಿದ ಆರೋಪಿಗಳಾದ ಗೋಪಾಲ ಖಣಿಮನಿ, ಉದಯಕುಮಾರ ಜೋಶಿ, ಶಿವಕುಮಾರ ರೇಶ್ಮಿ ಮತ್ತು ಸುರೇಶ ಚಿನಗುಂಡಿ ಎಂಬುವವರು ಪತ್ರಿಕೆ ಮತ್ತು ಟಿ.ವಿ.ಮಾಧ್ಯಮಗಳ ಹೆಸರು ಹೇಳಿಕೊಂಡು ಗುರುತಿನ ಚೀಟಿ ತೋರಿಸಿ, ಮದ್ಯಕ್ಕೆ ಬೇಡಿಕೆ ಇಟ್ಟಿದ್ದರು. ಮದ್ಯ ಕೊಡದಿದ್ದರೆ ಸುದ್ದಿ ಪ್ರಸಾರ ಮಾಡುವುದಾಗಿಬೆದರಿಕೆ ಒಡ್ಡಿದ್ದರು ಎಂದು ಸುರೇಶ ತೇರದಾಳ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT