ಕಾರ್ಪಾಡಿ ದೇವಳಕ್ಕೆ ಪುತ್ತೂರು, ಕುಂಬ್ಳೆ, ವಿಟ್ಲ ಸೀಮೆಯ 14 ಗ್ರಾಮಗಳ ಭಕ್ತರು ಇದ್ದಾರೆ. ದೇವಳದಲ್ಲಿ ಬ್ರಹ್ಮಕಲಶೋತ್ಸವ ನಡೆದು 12 ವರ್ಷ ಕಳೆದಿದೆ. ದೇವಳದಲ್ಲಿ ಹೊಸದಾಗಿ ಸುತ್ತುಪೌಳಿ, ನಾಗನಕಟ್ಟೆ, ಗಣಪತಿಗುಡಿ, ದುರ್ಗಾಗುಡಿ ನಿರ್ಮಾಣವಾಗಲಿವೆ. ₹2ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಡಿ. 18ರಂದು ಒಂದು ದಿನದ ಪ್ರಶ್ನಾ ಚಿಂತನೆ ದೇವಳದಲ್ಲಿ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.