ಸುರತ್ಕಲ್: ಸುರತ್ಕಲ್ ಪೋಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದ ಬಳಿಯ ಗಣೇಶಪುರ ಜಂಕ್ಷನ್ನಲ್ಲಿ ಬೈಕ್ಗೆ ಕಾರು ಒರೆಸಿಹೋಯಿತೆಂಬ ಕಾರಣಕ್ಕೆ ಎರಡು ತಂಡಗಳ ನಡುವೆ ಜಗಳವಾಗಿದ್ದು, ಎರಡೂ ಕಡೆಯವರು ಬುಧವಾರ ರಾತ್ರಿ ಹೊಡೆದಾಡಿದ್ದಾರೆ.
ಇತ್ತೀಚಿಗೆ ಕೊಲೆಯಾದ ಫಾಝಿಲ್ ಅವರ ತಮ್ಮ ಆದಿಲ್ ಹಾಗೂ ಇತರರು ಹೋಡೆದಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಗಣೇಶಪುರ ಜಂಕ್ಷನ್ನಲ್ಲಿ ದ್ವಿಚಕ್ರವಾಹನ ಮತ್ತು ಕಾರಿನ ನಡುವೆ ಡಿಕ್ಕಿ ಉಂಟಾಗಿತ್ತು. ಆ ಬಳಿಕ ಸ್ಥಳದಲ್ಲಿ ಗಲಾಟೆ ನಡೆದಿತ್ತು. ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಜಗಳವಾಡುತ್ತಿದ್ದವನ್ನು ಪೊಲೀಸರು ಹಾಗೂ ಸ್ಥಳೀಯರು ಸೇರಿ ಚದುರಿಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದರು.
‘ದೂರು ನೀಡುವುದಾಗಿ ಎರಡೂ ಕಡೆಯವರು ತಿಳಿಸಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.
ಗಲಾಟೆ ನಡೆದ ಸ್ಥಳವು ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಉ೦ಟಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಬಿಗು ಬಂದೋಬಸ್ತ್ ಮಾಡಿದ್ದಾರೆ.