ಕಾಮಗಾರಿ ನಡೆಸುತ್ತಿರುವ ಶೋಭಾಲಕ್ಷ್ಮೀ ‘ಇದು ತಮ್ಮ ವ್ಯಾಪ್ತಿಗೆ ಬರುವ ಕಾಮಗಾರಿಯಲ್ಲ’, ಎಂದು ಹೇಳುತ್ತಿದ್ದಂತೆ ರೊಚ್ಚಿಗೆದ್ದ ವಕೀಲ ಅಸ್ಗರ್, ‘ಲಂಚ ಪಡೆದು ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಸುತ್ತಿದ್ದೀರಾ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದೀರಿ. ನೀವು ಅಧಿಕಾರಿಯಾಗಿರಲು ನಾಲಾಯಕ್, ನಾಯಿಯಂತೆ ವರ್ತಿಸುತ್ತಿದ್ದೀರಿ’ ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.