ಅರುಣ್ ಪಾಟೀಲ ವಿದ್ಯಾರ್ಥಿ ಪರಿಷತ್ನ ಯಾವುದೇ ಜವಾಬ್ದಾರಿಯಲ್ಲಿ ಇಲ್ಲ. ಪರಿಷತ್ನಲ್ಲಿ ವಾರ್ಷಿಕ ಸದಸ್ಯತ್ವ ಮಾತ್ರವಿದ್ದು, ಅದನ್ನು ಹೊರತುಪಡಿಸಿ ಯಾರೂ ಸಂಘಟನೆಯ ಭಾಗವಾಗಿರುವುದಿಲ್ಲ. ಸಂಘಟನೆಯೊಂದಿಗೆ ಯಾವುದೇ ಹೊಣೆಗಾರಿಕೆ ಇಲ್ಲದೇ ಇರುವ ವ್ಯಕ್ತಿಯನ್ನು ಸಂಘಟನೆಯ ಮುಖಂಡ ಎಂಬಂತೆ ಬಿಂಬಿಸಿ, ತನಿಖೆಯ ಹಾದಿ ತಪ್ಪಿಸುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.