ನಿಷೇಧಿತ ಅವಧಿಯಲ್ಲಿ ಜಿಲ್ಲೆಯ ನದಿಗಳಲ್ಲಿ ನೇತ್ರಾವತಿ, ಪಲ್ಗುಣಿ, ಶಾಂಭವಿ ನದಿಗಳಲ್ಲಿ ಅಕ್ರಮ ಮರಳುಗಾರಿಕೆ ದಂದೆ ವ್ಯಾಪಕವಾಗಿ ನಡೆಯುತ್ತಿದೆ. ಆಡಳಿತ ಪಕ್ಷದ ಪ್ರಭಾವಿ ಜನಪ್ರತಿನಿಧಿಗಳ ಆಪ್ತರು ಮರಳು ದಂಧೆಯ ಸೂತ್ರದಾರರು ಎಂಬುದು ತಿಳಿಯದ ವಿಷಯವೇನಲ್ಲ. ಸಾರ್ವಜನಿಕವಾಗಿಯೆ ಹಿಟಾಚಿ, ಜೆಸಿಬಿಗಳಂತಹ ಯಂತ್ರಗಳನ್ನು ಮರಳುಗಾರಿಕೆಗೆ ಬಳಸುತ್ತಿದ್ದರೂ ಪೊಲೀಸ್ ಇಲಾಖೆಯೂ ಸೇರಿ, ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ನಾಗರಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿವೆ. ಪೊಲೀಸ್ ಠಾಣೆಗಳ ಮುಂಭಾಗದಲ್ಲೇ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ನಡೆದರೂ ತಡೆಯಲು ಮುಂದಾಗದಿರುವುದು ಮರಳು ದಂದೆಕೋರರಿಗೆ ಉನ್ನತ ಮಟ್ಟದ ಸಂಪರ್ಕ, ಆಡಳಿತದ ಶಾಮೀಲಾತಿಯನ್ನು ಎತ್ತಿತೋರಿಸುತ್ತದೆ. ಇದರಿಂದಾಗಿ ಜಿಲ್ಲೆಯ ಜೀವನದಿಗಳಿಗೆ, ಪರಿಸರಕ್ಕೆ ವ್ಯಾಪಕ ಹಾನಿ ಒಂದಡೆಯಾದರೆ, ಜನಸಾಮಾನ್ಯರಿಗೆ ಮರಳು ಕೈಗೆಟುಕದಷ್ಟು ದುಬಾರಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.