ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಜಾಬ್ ವಿವಾದ, ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಒಂದು ಸಮುದಾಯದವರಿಗೆ ನಿಷೇಧ, ಶಾಲೆಗಳಲ್ಲಿ ಭಗವದ್ಗೀತೆ, ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಶಾಸಕರು, ಸಚಿವರೇ ನೀಡುತ್ತಿದ್ದಾರೆ. ಈ ರೀತಿ ಕೋಮು ದ್ವೇಷಕ್ಕೆ ಬೆಂಬಲ ನೀಡುವ, ಸಮಾಜ ಒಡೆಯುವ ಸಂಸ್ಕೃತಿ ಯಾವತ್ತೂ ಇರಲಿಲ್ಲ’ ಎಂದರು.