ಆರ್ಕಿಡ್ ಗ್ಯಾಲರಿ ಸಹಯೋಗದಲ್ಲಿ ಆಗಸ್ಟ್ 15ರವರೆಗೆ ನಡೆಯಲಿರುವ ಏಕತೆ ಮತ್ತು ಸಮಗ್ರತೆಯ ಪರಿಕಲ್ಪನೆಯಈ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಯಾಣಿಕರಿಗೆ ಕ್ಯಾನ್ವಾಸ್ ಮೇಲೆ ಚಿತ್ರ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ದ್ವಾರದಲ್ಲಿ ಕ್ಯಾನ್ವಾಸ್ ಇಡಲಾಗಿದೆ. ಶನಿವಾರ ಅನೇಕ ಪ್ರಯಾಣಿಕರು ಕಲ್ಪನೆಯಲ್ಲಿ ಅರಳಿದ ಚಿತ್ರಗಳನ್ನು ಕ್ಯಾನ್ವಾಸ್ನಲ್ಲಿ ಮೂಡಿಸಿದರು. ಅವರಿಗೆ ಉಡುಗೊರೆಯಾಗಿ ಬುಕ್ಮಾರ್ಕ್ಗಳನ್ನು ನೀಡಲಾಯಿತು. ಮಂಗಳೂರು ಏರ್ಪೋರ್ಟ್ ಈ ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.