ಮೂಡುಬಿದಿರೆ: ಅಲ್ಲಮನ ಹೆಸರಿನಲ್ಲಿ ವಚನ ಧರ್ಮದ ಅಧ್ಯಯನ ಮತ್ತು ಸಂಶೋಧನೆಯ ಉದ್ದೇಶದಿಂದ ಕಾಂತಾವರದಲ್ಲಿ ಸ್ಥಾಪನೆಯಾದ ಅಲ್ಲಮ ಪೀಠದ ನೂತನ ಗೌರವಾಧ್ಯಕ್ಷರಾಗಿ ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಇದುವರೆಗೂ ಪೀಠಕ್ಕೆ ಡಿ.ಕೆ. ಚೌಟ ಗೌರವಾಧ್ಯಕ್ಷರಾಗಿದ್ದರು. ಅವರು ನಿಧನರಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸಾಹಿತಿಯೂ ಆದ ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.