ಮಂಗಳೂರಿನ ಗಂಗಾಧರ್ ಅವರಿಗೆ ಸೇರಿದ ‘ಶ್ರೀ ಗಣೇಶ್ ಆಂಬುಲೆನ್ಸ್’ ವಾಹನಕ್ಕೆ ಹಾನಿ ಮಾಡಲಾಗಿದೆ. ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ರಹೀಂ ಎಂಬುವರು ಚಲಾಯಿಸುತ್ತಿದ್ದ ಈ ವಾಹನವನ್ನು ಗುರುವಾರ ರಾತ್ರಿ 8.30ಕ್ಕೆ ತನ್ನ ಮನೆ ಸಮೀಪ ನಿಲ್ಲಿಸಿದ್ದರು. ಬೆಳಿಗ್ಗೆ ನೋಡಿದಾಗ ಆಂಬುಲೆನ್ಸ್ನ ಸುತ್ತ ಗಾಜು ಒಡೆದಿರುವ ದುಷ್ಕರ್ಮಿಗಳು ಸೈರನ್ ಆಂಪ್ಲಿಫೈಯರ್, ಆಕ್ಸಿಜನ್ ರೆಗ್ಯುಲೇಟರ್ , ಪಿಪಿಇ ಕಿಟ್ಗಳನ್ನು ಹೊರೆಗೆಸೆದು ದಾಂದಲೆ ನಡೆಸಿದ್ದಾರೆ.