ಬೆಂಗಳೂರು: ಬಾದಾಮಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ, ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಆಡಳಿತವನ್ನು ಸ್ಮರಿಸಿ ಟ್ವೀಟಿಸಿದ್ದಾರೆ.
ವಾತಾಪಿ(ಬಾದಾಮಿ) ಚಾಲುಕ್ಯರ ರಾಜಧಾನಿಯಾಗಿತ್ತು. ‘ನನ್ನನ್ನು ನಾನು ಬಾದಾಮಿ ಜನರ ಕೈಗಳಲ್ಲಿ ಇಟ್ಟಿರುವ ಸಂದರ್ಭದಲ್ಲಿ ಉತ್ತರ ಭಾರತದ ಬಲಶಾಲಿ ದೊರೆಯಾಗಿದ್ದ ಹರ್ಷವರ್ಧನನ್ನು ನರ್ಮದಾ ತೀರದಲ್ಲಿ ಇಮ್ಮಡಿ ಪುಲಕೇಶಿ ಸೋಲಿಸಿದ್ದು ನೆನಪಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
As I place myself in the hands of the people of #Badami I remember how Pulakeshi II defeated the powerful North Indian King Harshavardana on the banks of Narmada.
I seek your blessings for building a Nava Karnataka #CongressMathomme