ನಾಲ್ಕೂರು ಮತ್ತು ಯೇನೆಕಲ್ಲು ಗ್ರಾಮಗಳನ್ನು ಹೊಂದಿಕೊಂಡಿರುವ ಅರಣ್ಯ ಪ್ರದೇಶ ತುಂಬತ್ತಾಜೆ, ವಲ್ಪಾರೆ, ಚಾರ್ಮತ ಅರಣ್ಯ ಪ್ರದೇಶದ ಹೊಡ್ಡೆತಮುಖ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಊರಿನವರು, ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಸೇರಿಕೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಮಂಗಳವಾರ ಸಂಜೆ ಒಮ್ಮೆ ನಂದಿಸಲಾಗಿತ್ತು. ಬುಧವಾರ ಮತ್ತೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.