‘ಸಮಾಜದ ಶೇ 90ರಷ್ಟು ಜನರು ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿ, ಸೋದರತೆ ಹಾಗೂ ಸೌಹಾರ್ದದಿಂದ ಜೀವನ ನಡೆಸಲು ಬಯಸುತ್ತಾರೆ. ಅಶಾಂತಿ ಇಲ್ಲದ, ಪರಸ್ಪರ ಅವಿಶ್ವಾಸ ಮೂಡಿಸುವ ಚಟುವಟಿಕೆಗೆ ಆಸ್ಪದವಿಲ್ಲದ ಸಮಾಜವನ್ನು ನಿರ್ಮಿಸುವ ಅಗತ್ಯವಿದೆ. ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿರುವ ಎಲ್ಲ ಸಂಘಟನೆಗಳ ವಿರುದ್ಧ ಸಾಕ್ಷ್ಯಗಳನ್ನು ಆಧರಿಸಿ ದಿಟ್ಟ ಕ್ರಮ ಕೈಗೊಳ್ಳಬೇಕು.ಸರ್ಕಾರ ತೋರಿಸುವ ನಿಜವಾದ ದೇಶಪ್ರೇಮ ಅದು’ ಎಂದರು.