<p><strong>ಬಂಟ್ವಾಳ:</strong> ತಾಲ್ಲೂಕಿನ ಕಡೇಶಿವಾಲಯ ಹಾಗೂ ಅಜಿಲಮೊಗರು ನಡುವೆ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ಆಗಿ ಒಂಬತ್ತು ವರ್ಷಗಳೇ ಕಳೆದಿವೆ. ಇನ್ನೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಮಳೆಗಾಲಕ್ಕೆ ಮುನ್ನವಾದರೂ ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳಬಹುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.</p>.<p>ನೇತ್ರಾವತಿ ನದಿಯ ಒಂದು ದಂಡೆಯಲ್ಲಿ ಕಡೇಶಿವಾಲಯದ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಇನ್ನೊಂದು ದಂಡೆಯಲ್ಲಿ ಅಜಿಲಮೊಗರು ಗ್ರಾಮದ ಸಯ್ಯದ್ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿ ಇದೆ. ಈ ಎರಡು ಧಾರ್ಮಿಕ ಕೇಂದ್ರಗಳನ್ನು ಬೆಸೆಯಲು ಸೇತುವೆ ನಿರ್ಮಿಸುವುದು ಗ್ರಾಮಸ್ಥರ ಕನಸು. 8 ಈ ಸೇತುವೆ ಪೂರ್ಣವಾದರೆ ಎರಡು ಧರ್ಮಗಳ ಶ್ರದ್ಧಾಕೇಂದ್ರಗಳನ್ನು ಬೆಸೆದಂತಾಗುತ್ತದೆ. ಹಾಗಾಗಿ ಈ ಸೇತುವೆಯನ್ನು ಸೌಹಾರ್ದ ಸೇತುವೆ ಎಂದೇ ಕರೆಯಲಾಗುತ್ತಿದೆ.</p>.<p>ಬಿ.ರಮಾನಾಥ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2016ರಲ್ಲಿ ಈ ಸೇತುವೆಗೆ ಅನುದಾನ ಮಂಜೂರಾಗಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಡಿಸಿಎಲ್) ಸಂಸ್ಥೆಗೆ ಈ ಕಾಮಗಾರಿ ನಿರ್ವಹಣೆಯ ಹೊಣೆ ವಹಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೇತುವೆ ಕಾಮಗಾರಿಗೆ 2017ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈನ ಎಸ್ಪಿಎಲ್ ಕಂಪನಿ ವಹಿಸಿಕೊಂಡಿದೆ. ಗುತ್ತಿಗೆದಾರರು 2021ರಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಅದರ ಗಡುವನ್ನು ಅನೇಕ ಸಲ ವಿಸ್ತರಿಸಲಾಗಿದೆ. ಕಾಮಗಾರಿಯ ವೆಚ್ಚವನ್ನೂ ಹೆಚ್ಚಿಸಲಾಗಿದೆ.</p>.<p>ಮೊದಲ ಎರಡು ವರ್ಷ ಕಾಮಗಾರಿ ಚೆನ್ನಾಗಿ ನಡೆಯಿತು. ಕೋವಿಡ್ ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು. ಆ ಬಳಿಕ ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ಸೇತುವೆ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಕಾಯಬೇಕಾಗುತ್ತೋ ತಿಳಿಯದು ಎನ್ನುತ್ತಾರೆ ಸ್ಥಳೀಯರು.</p>.<p>ಸೇತುವೆಯ ಎಲ್ಲ 14 ಪಿಲ್ಲರ್ಗಳನ್ನು ಅಳವಡಿಸಲಾಗಿದೆ. ಕಡೆಶಿವಾಲಯ ಕಡೆಯಿಂದ ಸುಮಾರು 10ನೇ ಪಿಲ್ಲರ್ವೆರೆಗೆ ಗರ್ಡರ್ಗಳನ್ನು ಜೋಡಿಸಿ, ರಸ್ತೆಯ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಲಾಗಿದೆ. ಅಜಿಲಮೊಗರು ಕಡೆಯಿಂದ ನಾಲ್ಕು ಪಿಲ್ಲರ್ಗಳ ಮೇಲೆ ಗರ್ಡರ್ಗಳನ್ನು ಜೋಡಿಸಿ, ಇನ್ನಷ್ಟೇ ಅದರ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಇನ್ನಷ್ಟೇ ನಿರ್ಮಿಸಬೇಕಾಗಿದೆ.</p>.<p>‘ಈ ಸೇತುವೆ ನಿರ್ಮಾಣವಾದರೆ ನೇತ್ರಾವತಿ ನದಿಯ ಉತ್ತರ ದಂಡೆಯಲ್ಲಿರುವ, ನಾವೂರು, ಮಣಿನಾಲ್ಕೂರು, ಸರಪಾಡಿ, ಉಳಿ, ಬಡಗ ಕಜೆಕಾರು, ತೆಂಕಕಜೆಕಾರು, ತೆಕ್ಕಾರು ಕುಟ್ಟಿಕಲ, ಮಾವಿನಕಟ್ಟೆ, ಪೆರಿಯಪಾದೆ, ಅಲ್ಲಿಪಾದೆ, ಗ್ರಾಮದವರು ನದಿಯ ದಕ್ಷಿಣ ದಂಡೆಯಲ್ಲಿರುವ ಪೆರ್ಲಾಪು, ಕಲ್ಲಾಜೆ, ಗಡಿಯಾರ, ಮಾಣಿಗೆ ಪ್ರಯಾಣಿಸುವುದು ಸುಲಭ’ ಎಂದು ಕಡೇಶಿವಾಲಯ ಗ್ರಾಮದ ನಿವಾಸಿ ದಿವಾಕರ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಡುವೆ ಮೂರು ವರ್ಷ ಈ ಸೇತುವೆ ಕಾಮಗಾರಿ ಸಂಪೂರ್ಣ ನಿಂತಿತ್ತು. ಈಗಿನ ಸರ್ಕಾರ ಬಂದ ಬಳಿಕ ಕಾಮಗಾರಿ ಮತ್ತೆ ಶುರುವಾಗಿದೆಯಾದರೂ, ದರ ವೇಗ ಏನೇನೂ ಸಾಲದರು. ಮೂರು ತಿಂಗಳಿನಿಂದ ಕಾಮಗಾರಿ ತುಸು ಚುರುಕಿನಿಂದ ಸಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಅಬ್ದುಲ್ ಸತ್ತಾರ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260319-29-1771059785</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಟ್ವಾಳ:</strong> ತಾಲ್ಲೂಕಿನ ಕಡೇಶಿವಾಲಯ ಹಾಗೂ ಅಜಿಲಮೊಗರು ನಡುವೆ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ಆಗಿ ಒಂಬತ್ತು ವರ್ಷಗಳೇ ಕಳೆದಿವೆ. ಇನ್ನೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಮಳೆಗಾಲಕ್ಕೆ ಮುನ್ನವಾದರೂ ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳಬಹುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.</p>.<p>ನೇತ್ರಾವತಿ ನದಿಯ ಒಂದು ದಂಡೆಯಲ್ಲಿ ಕಡೇಶಿವಾಲಯದ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಇನ್ನೊಂದು ದಂಡೆಯಲ್ಲಿ ಅಜಿಲಮೊಗರು ಗ್ರಾಮದ ಸಯ್ಯದ್ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿ ಇದೆ. ಈ ಎರಡು ಧಾರ್ಮಿಕ ಕೇಂದ್ರಗಳನ್ನು ಬೆಸೆಯಲು ಸೇತುವೆ ನಿರ್ಮಿಸುವುದು ಗ್ರಾಮಸ್ಥರ ಕನಸು. 8 ಈ ಸೇತುವೆ ಪೂರ್ಣವಾದರೆ ಎರಡು ಧರ್ಮಗಳ ಶ್ರದ್ಧಾಕೇಂದ್ರಗಳನ್ನು ಬೆಸೆದಂತಾಗುತ್ತದೆ. ಹಾಗಾಗಿ ಈ ಸೇತುವೆಯನ್ನು ಸೌಹಾರ್ದ ಸೇತುವೆ ಎಂದೇ ಕರೆಯಲಾಗುತ್ತಿದೆ.</p>.<p>ಬಿ.ರಮಾನಾಥ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2016ರಲ್ಲಿ ಈ ಸೇತುವೆಗೆ ಅನುದಾನ ಮಂಜೂರಾಗಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಡಿಸಿಎಲ್) ಸಂಸ್ಥೆಗೆ ಈ ಕಾಮಗಾರಿ ನಿರ್ವಹಣೆಯ ಹೊಣೆ ವಹಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೇತುವೆ ಕಾಮಗಾರಿಗೆ 2017ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈನ ಎಸ್ಪಿಎಲ್ ಕಂಪನಿ ವಹಿಸಿಕೊಂಡಿದೆ. ಗುತ್ತಿಗೆದಾರರು 2021ರಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಅದರ ಗಡುವನ್ನು ಅನೇಕ ಸಲ ವಿಸ್ತರಿಸಲಾಗಿದೆ. ಕಾಮಗಾರಿಯ ವೆಚ್ಚವನ್ನೂ ಹೆಚ್ಚಿಸಲಾಗಿದೆ.</p>.<p>ಮೊದಲ ಎರಡು ವರ್ಷ ಕಾಮಗಾರಿ ಚೆನ್ನಾಗಿ ನಡೆಯಿತು. ಕೋವಿಡ್ ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು. ಆ ಬಳಿಕ ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ಸೇತುವೆ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಕಾಯಬೇಕಾಗುತ್ತೋ ತಿಳಿಯದು ಎನ್ನುತ್ತಾರೆ ಸ್ಥಳೀಯರು.</p>.<p>ಸೇತುವೆಯ ಎಲ್ಲ 14 ಪಿಲ್ಲರ್ಗಳನ್ನು ಅಳವಡಿಸಲಾಗಿದೆ. ಕಡೆಶಿವಾಲಯ ಕಡೆಯಿಂದ ಸುಮಾರು 10ನೇ ಪಿಲ್ಲರ್ವೆರೆಗೆ ಗರ್ಡರ್ಗಳನ್ನು ಜೋಡಿಸಿ, ರಸ್ತೆಯ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಲಾಗಿದೆ. ಅಜಿಲಮೊಗರು ಕಡೆಯಿಂದ ನಾಲ್ಕು ಪಿಲ್ಲರ್ಗಳ ಮೇಲೆ ಗರ್ಡರ್ಗಳನ್ನು ಜೋಡಿಸಿ, ಇನ್ನಷ್ಟೇ ಅದರ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಇನ್ನಷ್ಟೇ ನಿರ್ಮಿಸಬೇಕಾಗಿದೆ.</p>.<p>‘ಈ ಸೇತುವೆ ನಿರ್ಮಾಣವಾದರೆ ನೇತ್ರಾವತಿ ನದಿಯ ಉತ್ತರ ದಂಡೆಯಲ್ಲಿರುವ, ನಾವೂರು, ಮಣಿನಾಲ್ಕೂರು, ಸರಪಾಡಿ, ಉಳಿ, ಬಡಗ ಕಜೆಕಾರು, ತೆಂಕಕಜೆಕಾರು, ತೆಕ್ಕಾರು ಕುಟ್ಟಿಕಲ, ಮಾವಿನಕಟ್ಟೆ, ಪೆರಿಯಪಾದೆ, ಅಲ್ಲಿಪಾದೆ, ಗ್ರಾಮದವರು ನದಿಯ ದಕ್ಷಿಣ ದಂಡೆಯಲ್ಲಿರುವ ಪೆರ್ಲಾಪು, ಕಲ್ಲಾಜೆ, ಗಡಿಯಾರ, ಮಾಣಿಗೆ ಪ್ರಯಾಣಿಸುವುದು ಸುಲಭ’ ಎಂದು ಕಡೇಶಿವಾಲಯ ಗ್ರಾಮದ ನಿವಾಸಿ ದಿವಾಕರ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಡುವೆ ಮೂರು ವರ್ಷ ಈ ಸೇತುವೆ ಕಾಮಗಾರಿ ಸಂಪೂರ್ಣ ನಿಂತಿತ್ತು. ಈಗಿನ ಸರ್ಕಾರ ಬಂದ ಬಳಿಕ ಕಾಮಗಾರಿ ಮತ್ತೆ ಶುರುವಾಗಿದೆಯಾದರೂ, ದರ ವೇಗ ಏನೇನೂ ಸಾಲದರು. ಮೂರು ತಿಂಗಳಿನಿಂದ ಕಾಮಗಾರಿ ತುಸು ಚುರುಕಿನಿಂದ ಸಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಅಬ್ದುಲ್ ಸತ್ತಾರ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260319-29-1771059785</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>