ಆರೋಪಿ ಸಕಲೇಶಪುರದವನಾಗಿದ್ದು, ಆತನ ಪತ್ನಿಯ ಮನೆ ಮುಡಿಪು ಸಮೀಪ ಪಾತೂರು ಆಗಿತ್ತು. ಅಲ್ಲಿ ಕೂಡ ಸ್ವಲ್ಪ ಸಮಯ ವಾಸವಾಗಿದ್ದ. ಅಲ್ಲದೆ ಹೂಹಾಕುವ ಕಲ್ಲು ಬಳಿ ನವಗ್ರಾಮ ಸೈಟ್ ನಲ್ಲಿ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕುಸುಮ ಅವರ ಮನೆ ಸಮೀಪದ ತೋಟದ ಕೆಲಸಕ್ಕೂ ಆತ ಬಂದಿದ್ದ. ಈ ಸಂದರ್ಭ ಕುಸುಮಾ ಅವರ ಮನೆ ಬಳಿ ಹಾವೊಂದು ಬಂದಿದ್ದಾಗ ಅದನ್ನು ಓಡಿಸಲು ಈತ ಬಂದಿದ್ದ ಎನ್ನಲಾಗಿದೆ.