<p>ಬಪ್ಪನಾಡು.. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಈ ಪ್ರಸಿದ್ಧ ಯಾತ್ರಾಸ್ಥಳ ವಿವಿಧ ಧರ್ಮಗಳ ಸೌಹಾರ್ದ ಕ್ಷೇತ್ರ. ಮುಸ್ಲಿಂ ವ್ಯಾಪಾರಿ ‘ಬಪ್ಪ ಬ್ಯಾರಿ’ ಅವರು ಸುಮಾರು 800 ವರ್ಷಗಳ ಹಿಂದೆ ಇಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವನ್ನು ಕಟ್ಟಿಸಿದ್ದರು ಎಂಬುದು ಇಲ್ಲಿನ ಐತಿಹ್ಯ. ಶಾಂಭವೀ ನದಿ ತಟದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಪ್ರಯುಕ್ತ ನಡೆಯುವ ‘ಶಯನೋತ್ಸವ’ ಬೇರೆಲ್ಲೂ ಕಾಣಸಿಗದ ವಿಶೇಷ ಆಚರಣೆ. ಶತಮಾನಗಳಿಂದ ಹಿಂದೂ–ಮುಸ್ಲಿಂ ಐಕ್ಯತೆಗೆ ಸಾಕ್ಷಿಯಾದ ದೇವಸ್ಥಾನವಿದು. ಮಲ್ಲಿಗೆ ಹೂವನ್ನು ಹೆಚ್ಚಾಗಿ ಬೆಳೆಯುವುದು ಕ್ರೈಸ್ತರು. ಶಯನೋತ್ಸವವು ಈ ಮೂರೂ ಧರ್ಮದವರನ್ನು ಬೆಸೆಯುತ್ತದೆ. ಕರಾವಳಿಯ ಸೌಹಾರ್ದ ಪರಂಪರೆಯ ಪ್ರತೀಕದಂತಿರುವ ಈ ದೇವಸ್ಥಾನ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿದೆ. <br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>