‘ಸಂಜೆ ಸಭೆಯನ್ನು ಸೋಮನಾಥ ಪಾಲ್ತಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡ ಶ್ರೀಕೃಷ್ಣ ಭಜನೆ ಮಹತ್ವ ತಿಳಿಸುವರು. ವಿಶ್ವನಾಥ ಪೂಜಾರಿ ನರ್ಕಳ, ಶಿವರಾಮ ಶೆಟ್ಟಿ ಕೊಲ್ಲಾಡಿ, ವಿದ್ಯೇಶ್ ರೈ ಕಿಲ್ಲಂಬಲೆಪಡ್ಪು, ಶೇಖರ ಪೂಜಾರಿ ಉಳಿಯತ್ತಡ್ಕ, ಗೋಪಾಲ ಸಪಲ್ಯ ಕಲ್ಲಮಜಲು, ಗೋಪಾಲ ಮಾಸ್ತರ್ ದಾರೆಪಡ್ಪು, ಲಕ್ಷ್ಮಣ ಸಪಲ್ಯ ಸಾಲೆತ್ತೂರು, ಧನಂಜಯ ಕಟ್ಟತ್ತಿಲ, ವಿಷ್ಣುಮೂರ್ತಿ, ಮುಖ್ಯ ಅತಿಥಿಗಳಾಗಿರುವರು. ಯುವಕ ಮಂಡಲದ ಹಿರಿಯ ಸದಸ್ಯ ಕೃಷ್ಣಪ್ಪ ಶೆಟ್ಟಿಗಾರ್ ಮಾವೆ ಅವರನ್ನು ಸನ್ಮಾನಿಸಲಾಗುವುದು. ಪ್ರತಿದಿನ ಧಾರ್ಮಿಕ ಸಭೆ ನಡೆಯಲಿದೆ’ ಎಂದರು.