ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ದರ್ಬೆ ಜಂಕ್ಷನ್, ಪರ್ಲಡ್ಕ, ಕೋರ್ಟ್ ರಸ್ತೆ, ಫಿಲೋನಗರ , ಕೂರ್ನಡ್ಕ, ಬೊಳುವಾರು ,ನೆಹರೂನಗರ ಮೊದಲಾದ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದರು. ಬಿಜೆಪಿ ಬಾವುಟದೊಂದಿಗೆ ನಗರದ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು. ನಗರದೆಲ್ಲೆಡೆ ‘ಮೋದಿ’ ಜಯಕಾರ ಮೊಳಗಿತು.