ಬಿಜೆಪಿ ಪಂಚಾಯಿತಿ ಸಮಿತಿಯ ಬುಧವಾರ ತುರ್ತು ಸಭೆ ನಡೆಸಿ, ಸರ್ಕಾರದ ಕನ್ನಡ ದಮನ ನೀತಿಯನ್ನು ಖಂಡಿಸಿ, ಒಮ್ಮತದ ನಿರ್ಣಯ ಕೈಗೊಂಡಿತು. ಸಭೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಸಮಿತಿ ಅಧ್ಯಕ್ಷ ಕರಿಂಬಿಲ ವಿಶ್ವನಾಥ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಾಲಕೃಷ್ಣ ಶೆಟ್ಟಿ ಕಡಾರು, ಅವಿನಾಶ್ ರೈ, ಡಿ. ಶಂಕರ, ಲಕ್ಷ್ಮೀನಾರಾಯಣ ಪೈ, ಕೃಷ್ಣ ಮಣಿಯಾಣಿ ಮೊಳೆಯಾರು, ಎಂ.ನಾರಾಯಣ ಭಟ್, ವಕೀಲ ಬಿ. ಗಣೇಶ್, ವಿಜಯಸಾಯಿ ಇದ್ದರು.