ಸಬ್ ಕಾ ವಿನಾಶ್: 'ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಹಸಿವು ಸೂಚ್ಯಂಕದಲ್ಲಿ ಭಾರತವು ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ದೇಶಗಳಿಗಿಂತಲೂ ಕೆಳಕ್ಕೆ ಇಳಿದಿರುವುದು ಇದಕ್ಕೆ ಸಾಕ್ಷಿ. ಮೋದಿ ಮಾತು ಮಾತಿಗೂ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಅನ್ನುತ್ತಾರೆ. ಈಗ ಸಬ್ ಕಾ ವಿಶ್ವಾಸ್ ಎಂಬುದನ್ನೂ ಹೇಳುತ್ತಿದ್ದಾರೆ. ಜನರ ಪರಿಸ್ಥಿತಿ ಸಬ್ ಕಾ ವಿನಾಶ್ ಎಂಬಂತಾಗಿದೆ' ಎಂದು ಟೀಕಿಸಿದರು.