ಆಗಸ್ಟ್ 5ರಂದು ಹಳೇ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಧ್ಯಾ-2 ಮೀನುಗಾರಿಕಾ ದೋಣಿ, ಹಿಂದೆ ಮುಳುಗಿದ್ದ ಹಡಗಿನ ಅವಶೇಷಗಳಿಗೆ ಡಿಕ್ಕಿ ಹೊಡೆದು ಮುಳುಗಿತ್ತು. ಈ ವೇಳೆ ಚಾಲಕ ಸೌಂದಿರರಾಜನ್ ಮತ್ತು 9 ಮಂದಿಯನ್ನು ಇತರ ಬೋಟ್ನವರು ರಕ್ಷಿಸಿದ್ದರು. ಆದರೆ, ಮೀನುಗಾರ ಕಣ್ಣತಾಸನ್ ನಾಪತ್ತೆಯಾಗಿದ್ದರು. ಈ ಬಗ್ಗೆ ದೋಣಿ ಮಾಲೀಕ ಭಾನುಪ್ರಕಾಶ್, ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.