ಶನಿವಾರ ಸಂಜೆ ಮಂಗಳೂರು ಧಕ್ಕೆಯಿಂದ ಹೊರಟ, ಉರ್ವ ನಿವಾಸಿ ಸುಂದರ ಪುತ್ರನ್ ಅವರ ಪುತ್ರ ಕೃಷ್ಣಕುಮಾರ್ ಮಾಲೀಕತ್ವದ ಬೋಟ್, ಪಣಂಬೂರಿನಿಂದ 90 ಮೀಟರ್ ಆಳಸಮುದ್ರದಲ್ಲಿ ಮುಳುಗಿದೆ. ಹತ್ತಿರದಲ್ಲಿ ಮತ್ತೊಂದು ಬೋಟ್ ಕೂಡ ಇತ್ತು. ಅವರು ಸಮೀಪ ತಲುಪುವಷ್ಟರಲ್ಲಿ ಬೋಟ್ ಆಳಕ್ಕೆ ಸಾಗುತ್ತ, ಕೊನೆಗೆ ಒಂದು ಭಾಗ ಮಾತ್ರ ಕಾಣಿಸುತ್ತಿತ್ತು. ತಕ್ಷಣ ಅವರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಎಲ್ಲರನ್ನೂ ರಕ್ಷಿಸಿ ತಮ್ಮ ಬೋಟ್ನಲ್ಲಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.