ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾಬಲೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯರ ವೃತ್ತಿ ಸಮಾಜದಲ್ಲಿ ನಾಜೂಕಿನಿಂದ ಕೂಡಿದ್ದು, ರೋಗಿ ಮತ್ತು ವೈದ್ಯರ ಸಂಬಂಧ ಸಮಾಜ ಬೆಸೆಯುವ ಗೋಡೆ ಇದ್ದಂತೆ. ವೃತ್ತಿಯ ನಡುವೆಯೂ ವೈದ್ಯೆ ರತಿದೇವಿ ಅವರು ಸಮಾಜಕ್ಕೆ ಎರಡು ಪುಸ್ತಕಗಳನ್ನು ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.