ಮಂಗಳೂರು: ‘ದೇಶದಲ್ಲಿ ಸ್ವಾತಂತ್ರ್ಯ ವೀರ ಎಂಬ ಬಿರುದು ಪಡೆದಿದ್ದು ಸಾವರ್ಕರ್ ಮಾತ್ರ. ಎರಡು ಬಾರಿ ಕಾಲಾಪಾನಿ ಶಿಕ್ಷೆ ಅನುಭವಿಸಿದ ಏಕೈಕ ಹೋರಾಟಗಾರ ಅವರು. ಸಾವಿರಾರು ಯುವ ಕ್ರಾಂತಿಕಾರಿಗಳನ್ನು ರೂಪಿಸಿ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದರು. ಬ್ರಿಟಿಷರು ಭಾರತ ಬಿಟ್ಟು ಹೋಗುವವರೆಗೂ ಭಯಪಟ್ಟಿದ್ದು ಸಾವರ್ಕರ್ಗೆ ಮಾತ್ರ’ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ಹೇಳಿದ್ದಾರೆ.