ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ ವಿಭಾಗೀಯ ಎಂಜಿನಿಯರ್ ಕೊಲೆ

Last Updated 3 ಜುಲೈ 2018, 15:21 IST
ಅಕ್ಷರ ಗಾತ್ರ


ಕಾಸರಗೋಡು : ಬಿ ಎಸ್ ಎನ್ ಎಲ್ ಕಾಸರಗೋಡು ವಿಭಾಗದ ಎಂಜಿನಿಯರನ್ನು ಕತ್ತಿಯಿಂದ ಕುತ್ತಿಗೆಗೆ ಕಡಿದು ಕೊಲೆಮಾಡಲಾಗಿದೆ. ಬೋವಿಕಾನ ಸಮೀಪದ ಮಲ್ಲ ಎಂಬಲ್ಲಿನ ನಿವಾಸಿ ಸುಧಾಕರ ನಾಯಕ್ (57) ಕೊಲೆಯಾದವರು. ಮಲ್ಲ ಜಂಕ್ಷನ್ ಬಳಿಯಲ್ಲಿ ಮಂಗಳವಾರ ಸಂಜೆ ಈ ಕೊಲೆ ನಡೆದಿದೆ.

ಮಲ್ಲ ಜಂಕ್ಷನ್ ಬಳಿಯಿಂದ 150 ಮೀಟರ್ ದೂರದಲ್ಲಿರುವ ತಮ್ಮ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಅವರನ್ನು ಕೊಲೆ ಮಾಡಲಾಗಿದೆ. ‘ಸುಧಾಕರ ಮತ್ತು ಅವರ ಸಂಬಂಧಿಕರ ಮಧ್ಯೆ ದ್ವೇಷ ಇದ್ದು, ದಾರಿಯ ಬಗ್ಗೆ ವಿವಾದ ಇತ್ತು
ಎಂಬುವುದಾಗಿಯೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಿರಿಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT