ಪಣಜಿ: ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಲ್ಲಿನ ವಿಶೇಷ ತನಿಖಾ ತಂಡದ (ಎಸ್ಐಟಿ) ಎದುರು ಕರ್ನಾಟಕದ ಶಾಸಕ ಸತೀಶ್ ಸೈಲ್ ಸೋಮವಾರ ಹಾಜರಾಗಲಿಲ್ಲ.
ಸೈಲ್ ಅವರ ಕಂಪನಿ ವಿರುದ್ಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 2007ರಿಂದ 2012ರ ನಡುವೆ ಕಬ್ಬಿಣದ ಅದಿರನ್ನು ಗೋವಾದಿಂದ ವಿದೇಶಕ್ಕೆ ಅಕ್ರಮವಾಗಿ ರಫ್ತು ಮಾಡಿರುವ ಆರೋಪ ಕಂಪನಿಯ ಮೇಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಸೈಲ್ ಅವರು ಎಸ್ಐಟಿ ಎದುರು ಹಾಜರಾಗಿ ಹೇಳಿಕೆ ನೀಡಬೇಕಿತ್ತು.