ಮಂಗಳೂರಿನಿಂದ ಕಳಸಕ್ಕೆ ಹೋಗುವ ಕೆಕೆಬಿ ಬಸ್ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಅಧಿಕ ಪ್ರಯಾಣಿಕರಿದ್ದರು. ಬಸ್ ಬೆಳಿಗ್ಗೆ 6 ಗಂಟೆಗೆ ಮಂಗಳೂರಿನಿಂದ ಹೊರಟಿತ್ತು. ಮೂಡುಬಿದಿರೆ ಬೆಳುವಾಯಿ ಬಳಿಯ ಬನ್ನಡ್ಕದಲ್ಲಿ ರಿಕ್ಷಾವೊಂದು ಅಡ್ಡ ಬಂದಿತ್ತು.ರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬಸ್ ಅನ್ನು ಪಕ್ಕಕ್ಕೆ ಸರಿಸಿದ್ದರು ಎಂದು ಪ್ರಯಾಣಿಕರೊಬ್ಬರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.