ಮಂಗಳೂರು: ಗೋಲಿಬಾರ್ನಲ್ಲಿ ಮೃತಪಟ್ಟವರು ಅಪರಾಧಿಗಳಾದರೆ ಪರಿಹಾರ ನೀಡಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ. ಮೃತಪಟ್ಟವರು ಅಮಾಯಕರಾದರೆ ಪರಿಹಾರ ನೀಡಲಾಗುವುದು ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಸಿಎಎ ಹೆಸರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದರು.
370 ವಿಧಿ ರದ್ದು, ರಾಮಮಂದಿರ ತೀರ್ಪು ಬಂದಾಗ ಗಲಭೆ ಆಗಲಿದೆ ಎಂದು ಕಾಂಗ್ರೆಸ್ನವರು ಅಂದುಕೊಂಡಿದ್ದರು. ಆದರೆ, ಏನೂ ಆಗಲಿಲ್ಲ. ಸಿಎಎ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದ್ದಂತೆಯೇ ಕಾಂಗ್ರೆಸ್ ಗಲಭೆಗೆ ಸಂಚು ರೂಪಿಸಿತ್ತು ಎಂದು ದೂರಿದರು.
ಶಾಸಕ ಯು.ಟಿ. ಖಾದರ್ ಅವರು ಬೆಂಕಿಯ ಮಾತುಗಳನ್ನು ಆಡಿದ್ದರೂ ಕಾಂಗ್ರೆಸ್ ಮೌನವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.