ಬೆಳಿಗ್ಗೆ 10.30ಕ್ಕೆ ಉಪವಾಸ ಸತ್ಯಾಗ್ರಹ ಆರಂಭಗೊಂಡಿತು. ಹಿರಿಯ ವಕೀಲರರಾದ ಬಿ.ವಿ. ಆಚಾರ್ಯ, ಕೆ. ಸುಬ್ಬಾ ರಾವ್, ಉದಯ ಹೊಳ್ಳ, ಎಸ್.ಎಸ್. ನಾಗಾನಂದ್, ರವಿವರ್ಮ ಕುಮಾರ್, ಅಶೋಕ್ ಹಾರನಹಳ್ಳಿ, ಡಿ.ಎಲ್.ಎನ್.ರಾವ್, ಸಿ.ಎಚ್. ಜಾದವ್, ಸಜ್ಜನ್ ಪೂವಯ್ಯ, ಪದ್ಮನಾಭ ವಿ.ಮಹಲೆ, ಜೈಕುಮಾರ್ ಪಾಟೀಲ, ಸದಾಶಿವ ರೆಡ್ಡಿ, ಡಿ.ಎಲ್.ಜಗದೀಶ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಮಾಜಿ ಅಧ್ಯಕ್ಷರಾದ ಕೆ.ಎನ್.ಪುಟ್ಟೇಗೌಡ, ಎಚ್.ಸಿ.ಶಿವರಾಮು ಸೇರಿದಂತೆ 250ಕ್ಕೂ ಹೆಚ್ಚು ವಕೀಲರು ಭಾಗವಹಿಸಿದರು.