ಕುದ್ರೋಳಿಯಲ್ಲಿ 1882ರಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆ ಪ್ರಾರಂಭಗೊಂಡಿತ್ತು. ಕಾರ್ಖಾನೆಯಲ್ಲಿನ ಕ್ರೈಸ್ತರಿಗಾಗಿ 1883ರಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತರ ಸಭೆ ಮತ್ತು 1884ರಲ್ಲಿ ಪ್ರಾಥಮಿಕ ಶಾಲೆಯನ್ನು ಬಾಸೆಲ್ ಮಿಶನ್ ಕಾರ್ಖಾನೆ ಪರಿಸರದಲ್ಲಿ ನಿರ್ಮಿಸಿತ್ತು. 1886ರಲ್ಲಿ ಅಗಸ್ಟ್ ಮೆನ್ನರ್ ನಾಯಕತ್ವದಲ್ಲಿ ಪ್ರತ್ಯೇಕವಾದ ಈ ಸಭೆಗೆ 1888ರಲ್ಲಿ ಹೊಸ ದೇವಾಲಯ ನಿರ್ಮಿಸಲಾಯಿತು. ಅದು ‘ವಿಶ್ರಾಂತಿ ದೇವಾಲಯ’ ಎಂದು ಹೆಸರು ಪಡೆಯಿತು.ನಂತರ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಂಡಿತ್ತು. ಆದರೆ, ಇತ್ತೀಚೆಗೆ ಆ ಶಾಲೆಯು ಮುಚ್ಚಿತು.