2018 ಮಾರ್ಚ್ 11ರಂದು ಸಂಜೆ ಶಶಿಶೇಖರ್ ಯಾದವ್, ತನ್ನ ಕೋಣೆಯ ಮುಂಭಾಗ ನಿಂತು ‘ನನ್ನ ಮೊಬೈಲ್ ಫೋನ್ ಒಡೆದವರು ಯಾರು?’ ಎಂದು ಕಿರಿಚಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಳಿದ ಮೂವರೂ ಆರೋಪಿಗಳು ಸೇರಿ ಆತನೊಂದಿಗೆ ಮೊಬೈಲ್ ಫೋನ್ ಒಡೆದಿರುವ ಬಗ್ಗೆ ಚರ್ಚಿಸುತ್ತಿದ್ದರು. ಈ ವಿಷಯದಲ್ಲಿ ಕಿರಿಚಾಡದಂತೆ ಸಲಹೆ ನೀಡಲು ಬಂದಿದ್ದ ಅದೇ ಕಂಪನಿಯಲ್ಲಿ ಕಾರ್ಮಿಕ, ಬಿಹಾರದ ಕದಾರಿಯಾ ಜಿಲ್ಲೆಯ ಶಿಷ್ಟಾ ಗ್ರಾಮದ ಅಜಯ್ ಕುಮಾರ್ ಚೌಧುರಿ ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು.