‘ಬುಧವಾರ ರಿಕ್ಷಾ ಉರುಳಿಬಿದ್ದು, ನನ್ನ ಕಾಲಿಗೆ ಗಾಯವಾಗಿತ್ತು. ಸ್ಥಳೀಯರು ನನ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಅಲ್ಲಿ ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ತಿಳಿಸಿದರು. ಆದರೆ, ಶುಕ್ರವಾರ ಬೆಳಿಗ್ಗೆ ನನ್ನಲ್ಲಿಗೆ ಬಂದ ಆಸ್ಪತ್ರೆಯ ಸಿಬ್ಬಂದಿ, ‘ನಿಮಗೆ ಕೋವಿಡ್–19 ಸೋಂಕು ಇದೆ. ಅದಕ್ಕೂ ಚಿಕಿತ್ಸೆ ಆಗಬೇಕು. ಸುಮಾರು ₹1 ಲಕ್ಷಕ್ಕೂ ಹೆಚ್ಚು ವೆಚ್ಚವಾಗಬಹುದು’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು’ ಎಂದು ಸಿರಾಜ್ ಆಘಾತಕ್ಕೀಡಾದ ಕ್ಷಣಗಳ ನೋವನ್ನು ತೋಡಿಕೊಂಡರು.