ಲಾರಿಯೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಣೆ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ನೆಲ್ಯಾಡಿ ಹೊರ ಠಾಣೆಯ ಎ.ಎಸ್.ಐ. ಸೀತಾರಾಮ ಮತ್ತು ತಂಡ ನೆಲ್ಯಾಡಿ ಬೆಥನಿ ಕಾಲೇಜು ಬಳಿ ಹೆದ್ದಾರಿಯಲ್ಲಿ ಕಾದು ನಿಂತುಹಾಸನ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿಯನ್ನು ತಡೆಗಟ್ಟಿದ್ದರು. ಲಾರಿಯಲ್ಲಿದ್ದ 28 ಎಮ್ಮೆ ಕರು ಮತ್ತು 1 ಹೋರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.