ಕೇರಳದ ಕಾಸರಗೋಡು ಜಿಲ್ಲೆ ಬದಿಯಡ್ಕ ಸಮೀಪದ ಕಯ್ಯಾರ ಗ್ರಾಮದ ಪೈವಳಿಕೆ ನಿಯಾಸಿಯಾಗಿದ್ದ ಯುವತಿಯ ಕೊಲೆ ಪ್ರಕರಣದ ವಿಚಾರಣೆಯನ್ನು ಶುಕ್ರವಾರವೇ ಪೂರ್ಣಗೊಳಿಸಿದ್ದ ನ್ಯಾಯಾಧೀಶೆ ಸಯೀದುನ್ನೀಸಾ ಅವರು, ‘ಮೋಹನ್ ಅಪರಾಧಿ’ ಎಂದು ಸಾರಿದ್ದರು. ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ವಾದ ಆಲಿಸಿದ ಅವರು, ಬುಧವಾರ ಆದೇಶ ಪ್ರಕಟಿಸಿದರು.