ಮಂಗಳೂರು: ಗುಜರಾತಿನ ರಾಜ್ಕೋಟ್ನಿಂದ ಹೊರಟಿದ್ದ ಪುತ್ತೂರಿನ ಇಬ್ಬರು ಯುವಕರು ಲಾಕ್ಡೌನ್ನಿಂದಾಗಿ ಗುಜರಾತ್-ಮಹಾರಾಷ್ಟ್ರ ಗಡಿಪ್ರದೇಶದಲ್ಲಿ ಸಿಲುಕಿದ್ದು, 22 ದಿನ ಕಾರಿನಲ್ಲೇ ಕಳೆದಿದ್ದಾರೆ. ಇವರ ಸಂಕಷ್ಟಕ್ಕೆ ಸ್ಪಂದಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಗುಜರಾತಿನ ವಲ್ಸಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆದು, ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.