<p>ಕಡಬ (ಉಪ್ಪಿನಂಗಡಿ): ಸಮೃದ್ಧ ಜೀವ ವೈವಿಧ್ಯ ತಾಣವಾದ ಪಶ್ಚಿಮಘಟ್ಟವನ್ನು ಉಳಿಸಲು ಗಟ್ಟಿ ಧ್ವನಿ ಎತ್ತಬೇಕಾಗಿದೆ. ಅಹಿಂಸಾತ್ಮಕ ಪ್ರತಿಭಟನೆ, ಜನಾಂದೋಲನ ರೂಪಿಸಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕಾಗಿದೆ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.</p>.<p>ಕಡಬ ತಾಲ್ಲೂಕು ಪೆರಾಬೆ ಗ್ರಾಮದ ಹೊಸ್ಮಠ ಸಮೀಪ ಉರುಂಬಿಯಲ್ಲಿ ಕುಮಾರಧಾರಾ ನದಿ ತಟದಲ್ಲಿ, ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೀವ ವೈವಿಧ್ಯ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸರ್ಕಾರಗಳು ಸುಸ್ಥಿರ ಅಭಿವೃದ್ಧಿ ಎಂದು ಹೇಳಿಕೊಂಡು ವಿವಿಧ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯಿಸುತ್ತಿವೆ. ಆದರೆ ನಮ್ಮ ನದಿ, ಕಣಿವೆ, ಪಶ್ಚಿಮಘಟ್ಟ ಅಭಿವೃದ್ಧಿಗಾಗಿ ಯಾವುದೇ ಯೋಜನೆ ರೂಪಿಸುವುದಿಲ್ಲ. ಇದು ಬೇಸರದ ವಿಷಯ’ ಎಂದರು.</p>.<p>ಎತ್ತಿನ ಹೊಳೆಗೆ ಮತ್ತೆ 3 ಅಣೆಕಟ್ಟು: ‘ಎತ್ತಿನ ಹೊಳೆ ಯೋಜನೆಗೆ ಈಗಾಗಲೇ ₹ 24 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಯೋಜನೆಯ ವೆಚ್ಚ ₹ 36 ಸಾವಿರ ಕೋಟಿಗೆ ಏರಿಕೆ ಆಗಲಿದೆ. 19,400 ಎಕರೆ ಕಾಡು ಇದರಿಂದಾಗಿ ನಾಶ ಆಗಿದೆ. ಇಷ್ಟೆಲ್ಲಾ ಆಗಿಯೂ ಚಿಕ್ಕಬಳ್ಳಾಪುರಕ್ಕೆ ನೀರು ತಲುಪಿಲ್ಲ. ಈಗ ಅದೇ ಪರಿಸರದಲ್ಲಿ ಮತ್ತೆ 3 ಅಣೆಕಟ್ಟೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಕೆಂಪುಹೊಳೆ, ಗುಂಡ್ಯ ಹೊಳೆ ಮೂಲಕ ಕುಮಾರಧಾರಾ, ನೇತ್ರಾವತಿಗೆ ಹರಿದು ಬರುವ ಅಲ್ಪಸ್ವಲ್ಪ ನೀರಿಗೂ ತಡೆಯುಂಟಾಗಲಿದೆ. ಭವಿಷ್ಯದಲ್ಲಿ ಈ ಭಾಗಕ್ಕೆ ನೀರೇ ಇಲ್ಲದಂತಾಗಬಹುದು’ ಎಂದು ಎಚ್ಚರಿಸಿದರು.</p>.<p>ಬೆಂಗಳೂರಿನ ಭಾರತೀಯ ಜೀವ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ, ‘ಎತ್ತಿನಹೊಳೆಯ ಮೂಲಕ ಚಿಕ್ಕಬಳ್ಳಾಪುರಕ್ಕೆ 24 ಟಿ.ಎಂ.ಸಿ. ನೀರು ಕೊಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ 110 ವರ್ಷಗಳ ಕಾಲ ಸುರಿದ ಮಳೆ ಪ್ರಮಾಣದ ಪ್ರಕಾರ, ಇಲ್ಲಿ ವರ್ಷದಲ್ಲಿ ಸಂಗ್ರಹ ಆಗುವ ಸರಾಸರಿ ನೀರು 12.85 ಟಿ.ಎಂ.ಸಿ.ಮಾತ್ರ. ಇದರಲ್ಲಿ 9 ಟಿ.ಎಂ.ಸಿ. ಸ್ಥಳೀಯ ರೈತರಿಗೆ, 3 ಟಿ.ಎಂ.ಸಿ. ಮೀನುಗಳಿಗೆ ಹೋಗುತ್ತದೆ. ಇನ್ನು ಕೇವಲ 0.85 ಟಿ.ಎಂ.ಸಿ. ನೀರು ಉಳಿಯುತ್ತದೆ. ಅದನ್ನು ಅಲ್ಲಿಗೆ ಕೊಂಡೊಯ್ಯುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p>‘₹ 19 ಸಾವಿರ ಕೋಟಿ ವ್ಯಯಿಸಿ ಚಿಕ್ಕಬಳ್ಳಾಪುರ ಪರಿಸರದ ಕೆರೆಗಳನ್ನು ಪುನಃಶ್ಚೇತನ ಮಾಡಿದರೆ, ಅಲ್ಲಿ 165 ಟಿ.ಎಂ.ಸಿ. ನೀರು ಪಡೆಯಬಹುದು. ಹೀಗಿರುವಾಗ ಎತ್ತಿನ ಹೊಳೆಗೆ ಇಷ್ಟೊಂದು ಹಣ ವ್ಯಯ ಮಾಡುವ ಅಗತ್ಯವಿದೆಯೇ. ಇವೆಲ್ಲ ಲೂಟಿ ಮಾಡುವ ಯೋಜನೆಗಳು. ನದಿ ಸಂರಕ್ಷಿಸುವ, ಪ್ರಭೇ ದ, ಜೀವ ವೈವಿಧ್ಯಗಳನ್ನು ಕಾಪಾ ಡಲು ಎಲ್ಲರೂ ಜಾಗೃತರಾಗಬೇಕಿದೆ’ ಎಂದರು.</p>.<p>ಜೀವವೈವಿಧ್ಯ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೀತಂ, ನಿರ್ದೇಶಕಿ ಪವಿತ್ರಾ, ಕಡಬ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಹೋರಾಟ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ, ಕಾನೂನು ಸಲಹೆಗಾರ ಶ್ರೀನಿವಾಸ್ ರಾವ್ ಇದ್ದರು. ಹೋರಾಟ ಸಮಿತಿ ಕಿರಣ್ ಗೋಗಟೆ ವಂದಿಸಿದರು. ಉಪನ್ಯಾಸಕ ಅಜಿತ್ ಹೆಬ್ಬಾರ್ ನಿರೂಪಿಸಿ ದರು. ಕುಮಾರಧಾರ ತಟದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-29-1999173327</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಡಬ (ಉಪ್ಪಿನಂಗಡಿ): ಸಮೃದ್ಧ ಜೀವ ವೈವಿಧ್ಯ ತಾಣವಾದ ಪಶ್ಚಿಮಘಟ್ಟವನ್ನು ಉಳಿಸಲು ಗಟ್ಟಿ ಧ್ವನಿ ಎತ್ತಬೇಕಾಗಿದೆ. ಅಹಿಂಸಾತ್ಮಕ ಪ್ರತಿಭಟನೆ, ಜನಾಂದೋಲನ ರೂಪಿಸಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕಾಗಿದೆ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.</p>.<p>ಕಡಬ ತಾಲ್ಲೂಕು ಪೆರಾಬೆ ಗ್ರಾಮದ ಹೊಸ್ಮಠ ಸಮೀಪ ಉರುಂಬಿಯಲ್ಲಿ ಕುಮಾರಧಾರಾ ನದಿ ತಟದಲ್ಲಿ, ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೀವ ವೈವಿಧ್ಯ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸರ್ಕಾರಗಳು ಸುಸ್ಥಿರ ಅಭಿವೃದ್ಧಿ ಎಂದು ಹೇಳಿಕೊಂಡು ವಿವಿಧ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯಿಸುತ್ತಿವೆ. ಆದರೆ ನಮ್ಮ ನದಿ, ಕಣಿವೆ, ಪಶ್ಚಿಮಘಟ್ಟ ಅಭಿವೃದ್ಧಿಗಾಗಿ ಯಾವುದೇ ಯೋಜನೆ ರೂಪಿಸುವುದಿಲ್ಲ. ಇದು ಬೇಸರದ ವಿಷಯ’ ಎಂದರು.</p>.<p>ಎತ್ತಿನ ಹೊಳೆಗೆ ಮತ್ತೆ 3 ಅಣೆಕಟ್ಟು: ‘ಎತ್ತಿನ ಹೊಳೆ ಯೋಜನೆಗೆ ಈಗಾಗಲೇ ₹ 24 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಯೋಜನೆಯ ವೆಚ್ಚ ₹ 36 ಸಾವಿರ ಕೋಟಿಗೆ ಏರಿಕೆ ಆಗಲಿದೆ. 19,400 ಎಕರೆ ಕಾಡು ಇದರಿಂದಾಗಿ ನಾಶ ಆಗಿದೆ. ಇಷ್ಟೆಲ್ಲಾ ಆಗಿಯೂ ಚಿಕ್ಕಬಳ್ಳಾಪುರಕ್ಕೆ ನೀರು ತಲುಪಿಲ್ಲ. ಈಗ ಅದೇ ಪರಿಸರದಲ್ಲಿ ಮತ್ತೆ 3 ಅಣೆಕಟ್ಟೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಕೆಂಪುಹೊಳೆ, ಗುಂಡ್ಯ ಹೊಳೆ ಮೂಲಕ ಕುಮಾರಧಾರಾ, ನೇತ್ರಾವತಿಗೆ ಹರಿದು ಬರುವ ಅಲ್ಪಸ್ವಲ್ಪ ನೀರಿಗೂ ತಡೆಯುಂಟಾಗಲಿದೆ. ಭವಿಷ್ಯದಲ್ಲಿ ಈ ಭಾಗಕ್ಕೆ ನೀರೇ ಇಲ್ಲದಂತಾಗಬಹುದು’ ಎಂದು ಎಚ್ಚರಿಸಿದರು.</p>.<p>ಬೆಂಗಳೂರಿನ ಭಾರತೀಯ ಜೀವ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ, ‘ಎತ್ತಿನಹೊಳೆಯ ಮೂಲಕ ಚಿಕ್ಕಬಳ್ಳಾಪುರಕ್ಕೆ 24 ಟಿ.ಎಂ.ಸಿ. ನೀರು ಕೊಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ 110 ವರ್ಷಗಳ ಕಾಲ ಸುರಿದ ಮಳೆ ಪ್ರಮಾಣದ ಪ್ರಕಾರ, ಇಲ್ಲಿ ವರ್ಷದಲ್ಲಿ ಸಂಗ್ರಹ ಆಗುವ ಸರಾಸರಿ ನೀರು 12.85 ಟಿ.ಎಂ.ಸಿ.ಮಾತ್ರ. ಇದರಲ್ಲಿ 9 ಟಿ.ಎಂ.ಸಿ. ಸ್ಥಳೀಯ ರೈತರಿಗೆ, 3 ಟಿ.ಎಂ.ಸಿ. ಮೀನುಗಳಿಗೆ ಹೋಗುತ್ತದೆ. ಇನ್ನು ಕೇವಲ 0.85 ಟಿ.ಎಂ.ಸಿ. ನೀರು ಉಳಿಯುತ್ತದೆ. ಅದನ್ನು ಅಲ್ಲಿಗೆ ಕೊಂಡೊಯ್ಯುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p>‘₹ 19 ಸಾವಿರ ಕೋಟಿ ವ್ಯಯಿಸಿ ಚಿಕ್ಕಬಳ್ಳಾಪುರ ಪರಿಸರದ ಕೆರೆಗಳನ್ನು ಪುನಃಶ್ಚೇತನ ಮಾಡಿದರೆ, ಅಲ್ಲಿ 165 ಟಿ.ಎಂ.ಸಿ. ನೀರು ಪಡೆಯಬಹುದು. ಹೀಗಿರುವಾಗ ಎತ್ತಿನ ಹೊಳೆಗೆ ಇಷ್ಟೊಂದು ಹಣ ವ್ಯಯ ಮಾಡುವ ಅಗತ್ಯವಿದೆಯೇ. ಇವೆಲ್ಲ ಲೂಟಿ ಮಾಡುವ ಯೋಜನೆಗಳು. ನದಿ ಸಂರಕ್ಷಿಸುವ, ಪ್ರಭೇ ದ, ಜೀವ ವೈವಿಧ್ಯಗಳನ್ನು ಕಾಪಾ ಡಲು ಎಲ್ಲರೂ ಜಾಗೃತರಾಗಬೇಕಿದೆ’ ಎಂದರು.</p>.<p>ಜೀವವೈವಿಧ್ಯ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೀತಂ, ನಿರ್ದೇಶಕಿ ಪವಿತ್ರಾ, ಕಡಬ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಹೋರಾಟ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ, ಕಾನೂನು ಸಲಹೆಗಾರ ಶ್ರೀನಿವಾಸ್ ರಾವ್ ಇದ್ದರು. ಹೋರಾಟ ಸಮಿತಿ ಕಿರಣ್ ಗೋಗಟೆ ವಂದಿಸಿದರು. ಉಪನ್ಯಾಸಕ ಅಜಿತ್ ಹೆಬ್ಬಾರ್ ನಿರೂಪಿಸಿ ದರು. ಕುಮಾರಧಾರ ತಟದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-29-1999173327</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>