ಬೆಳಿಗ್ಗೆ ಪ್ರವಾಸ ಹೊರಟರೆ ಮಂಗಳೂರು ಸುತ್ತಮುತ್ತಲಿನ ಒಂಬತ್ತು ವಿವಿಧ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ, ಸಂಜೆ ವಾಪಸ್ ಬರಬಹುದು. ಹಸಿರು ಬಣ್ಣದ ನರ್ಮ್ ಬಸ್ ಅನ್ನು ಪ್ರಾಯೋಗಿಕವಾಗಿ ಪ್ರವಾಸಕ್ಕೆ ಬಳಸಲಾಗುತ್ತಿದೆ. ಒಂದು ಬಸ್ನಲ್ಲಿ 40 ಜನರಿಗೆ ಸ್ಥಳಾವಕಾಶ ಇರಲಿದೆ. ಬೆಳಿಗ್ಗೆ 8 ಗಂಟೆಗೆ ಬಿಜೈ ಬಸ್ ನಿಲ್ದಾಣದಿಂದ ಹೊರಡುವ ಬಸ್, ಬೆಳಿಗ್ಗೆ 8ರಿಂದ 9ರವರೆಗೆ ಮಂಗಳಾದೇವಿ ದೇವಸ್ಥಾನ, ಅಲ್ಲಿಂದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೈಕಂಬ– ಸುಂಕದಕಟ್ಟೆ ಮಾರ್ಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಅಲ್ಲಿಂದ ಮುಂದೆ ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನದಿಂದ ಕುದ್ರೋಳಿ ಗೋಕರ್ಣನಾಥ
ದೇವಸ್ಥಾನಕ್ಕೆ 6.30ಕ್ಕೆ ತಲುಪಿ ನಂತರ 8.30ಕ್ಕೆ ಮರಳಿ ಮಂಗಳೂರು ಬಸ್ ನಿಲ್ದಾಣಕ್ಕೆ ಬಸ್ ಬರುತ್ತದೆ.