ಭಕ್ತರ ಸಾಗರ: ಸರಣಿ ರಜೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಭಕ್ತರ ಪ್ರವಾಹವೇ ಹರಿದು ಬಂದಿತ್ತು. ಜನದಟ್ಟಣೆಯಿಂದಾಗಿ ನೂರಾರು ಭಕ್ತರು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇರಿದಂತೆ ಇತರೆ ಸೇವೆ ಮಾಡಿಸಲು ಸಾಧ್ಯವಾಗದೆ, ಕೇವಲ ದೇವರ ದರ್ಶನ ಮಾಡಿ ತೆರಳಿದರು ಎನ್ನಲಾಗಿದೆ.